
ಬೆಳಗಾವಿ(ಫೆ.08): ಆತನಿಗೆ 34 ವರ್ಷ, ತಾಯಿ ಮತ್ತು ಸೋದರರು ಚಿಕಿತ್ಸೆ ಕೊಡಿಸದ ಆಸ್ಪತ್ರೆಗಳೇ ಇಲ್ಲ. ಆದರೂ ಯಾವುದೇ ಪ್ರಯೋಜನ ಆಗಿಲ್ಲ. ಇದರಿಂದ ರೋಸಿ ಹೋದ ಕುಟುಂಬಸ್ಥರು ಏನು ಮಾಡಿದ್ದಾರೆ ಅಂತ ನೋಡಿದರೆ ಕರಳು ಹಿಂಡಿ ಬರುತ್ತದೆ. ಅಷ್ಟಕ್ಕೂ ಅವರೇನು ಮಾಡಿದರು ಅಂತೀರಾ? ಹಾಗಾದರೆ ಈ ಸ್ಟೋರಿ ಓದಿ.
ಭೀಮಪ್ಪ ಪಿಡಾಯಿ ಬೆಳಗಾವಿಯ ರಾಯಭಾಗ ತಾಲೂಕಿನ ಕಟಕಭಾವಿಯವನು. 12 ವರ್ಷಗಳಿಂದ ಈತ ಮಾನಸಿಕ ರೋಗದಿಂದ ಬಳಲುತ್ತಿರುವ ಭೀಮಪ್ಪ ಕಳೆದ ಮೂರು ವರ್ಷಗಳಿಂದ ಊರ ಹೊರಗಿನ ತೋಟದಲ್ಲಿ ಜೀವಿಸುತ್ತಿದ್ದಾನೆ. ಮಳೆ, ಚಳಿ ಏನೇ ಬಂದರೂ ಕೇವಲ ಗಿಡವೇ ಭೀಮಪ್ಪನಿಗೆ ಆಸರೆ.
ದಾರಿಹೋಕರ ಮೇಲೆ ಈತ ಹಲ್ಲೆ ಮಾಡುತ್ತಾನಂತೆ. ಮಹಿಳೆಯರು, ಮಕ್ಕಳ ಮೇಲೂ ಕಲ್ಲು ಎಸೆಯುತ್ತಾನಂತೆ. ಹೀಗಾಗಿ ಊರಿನ ಜನರೇ ಹಲವು ಸಲ ಭೀಮಪ್ಪನನ್ನ ಹಿಡಿದು ಥಳಿಸಿದ್ದಾರೆ. ಇದರಿಂದ ಬೇಸತ್ತು ಮನೆಯವರೇ ಕೈ-ಕಾಲುಗಳಿಗೆ ಸಂಕೋಲೆಯಿಂದ ಬಂಧಿಸಿ ಇಟ್ಟಿದ್ದಾರೆ.
ಭೀಮಪ್ಪನಿಗೆ ಕುಟುಂಬಸ್ಥರು ತೋರಿಸದ ಆಸ್ಪತ್ರೆಗಳಿಲ್ಲ. ಆದರೆ, ಬಡತನ ಹೆಚ್ಚಿನ ಚಿಕಿತ್ಸೆಗೆ ಅಡ್ಡಿಯಾಗಿದೆ. ಒಟ್ಟಿನಲ್ಲಿ ಭೀಮಪ್ಪನ ಈ ರೋಗ ಹಾಗೂ ಸಂಕೋಲೆಯಿಂದ ಮುಕ್ತಿ ಕೊಡಿಸಲು ಸರ್ಕಾರ ಮುಂದಾಗಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.