
ನವದೆಹಲಿ (ಜ.18): ಸಂಸ್ಕೃತ ಮಂತ್ರಗಳನ್ನು ಉರುಹೊಡೆದರೆ ನೆನಪಿನ ಶಕ್ತಿ ವೃದ್ಧಿಯಾಗುತ್ತದೆ ಎಂದು ಇಟಲಿಯ ನರರೋಗ ವಿಜ್ಞಾನಿಯೊಬ್ಬರು ಮಹತ್ವದ ಸಂಶೋಧನೆ ಮಾಡಿದ್ದಾರೆ.
ವೇದ ಮಂತ್ರಗಳನ್ನು ಪಠಿಸುವುದರಿಂದ ಸ್ಮರಣೆಗೆ ಸಂಬಂಧಿಸಿದ ಮೆದುಳಿನ ಭಾಗಗಳಲ್ಲಿ ಶಕ್ತಿ ಹೆಚ್ಚಾಗುತ್ತದೆ ಎಂದು ಇಟಲಿಯ ಟ್ರೆಂಟೋ ವಿಶ್ವವಿದ್ಯಾಲಯದ ನರರೋಗ ವಿಜ್ಞಾನಿ ಜೇಮ್ಸ್ ಹರ್ಟ್ಜೆಲ್ ಅವರು ತಿಳಿಸಿದ್ದಾರೆ.
ಯಾವುದೇ ಒಂದು ಭಾಷೆ ಬಳಸಿದರೆ ಅದರಿಂದ ಪ್ರಭಾವವಾಗುತ್ತದೆ ಎಂಬ ಚರ್ಚೆ ಸಾಂಪ್ರದಾಯಿಕವಾಗಿ ಈವರೆಗೂ ಇತ್ತು. ಅದರಲ್ಲೇ ಮುಂದುವರಿದಿರುವ ಜೇಮ್ಸ್ ಅವರು ಸಂಸ್ಕೃತವನ್ನು ಕೇಂದ್ರವಾಗಿಟ್ಟುಕೊಂಡು ಸಂಶೋಧನೆ ನಡೆಸಿದ್ದಾರೆ. ಹರ್ಯಾಣದ ಮಾನೇಸರ್'ನಲ್ಲಿರುವ ರಾಷ್ಟ್ರೀಯ ಮೆದುಳು ಸಂಶೋಧನಾ ಕೇಂದ್ರದ ವಿಜ್ಞಾನಿಗಳಾದ ಡಾ| ತನ್ಮಯ್ ಹಾಗೂ ಡಾ| ನಂದಿನಿ ಜತೆ ಅವರು ಪರಾಮರ್ಶೆ ನಡೆಸಿದ್ದಾರೆ. 42
ಸ್ವಯಂ ಸೇವಕರನ್ನು ಬಳಸಿಕೊಂಡು ಈ ಅಧ್ಯಯನ ನಡೆಸಲಾಗಿದೆ. ಆ ಪೈಕಿ 21 ಮಂದಿ ವೃತ್ತಿಪರ ಸಂಸ್ಕೃತ ಪಂಡಿತರಾಗಿದ್ದು, ಶುಕ್ಲ ಯಜುರ್ವೇದ ಪಠಿಸುವವರಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.