
ನಾರ್ತ್ ಗಾರೋ ಹಿಲ್ಸ್ (ಮೇಘಾಲಯ): ಕೇಂದ್ರ ಸರ್ಕಾರ ಇತ್ತೀಚೆಗೆ ಹೊರಡಿಸಿರುವ ಗೋಹತ್ಯೆ/ಮಾರಾಟಕ್ಕೆ ಸಂಬಂಧಿಸಿ ಸುತ್ತೋಲೆಯನ್ನು ಪ್ರತಿಭಟಿಸಿ ಮೇಘಾಲಯದ ಇನ್ನೋರ್ವಾ ಬಿಜೆಪಿ ನಾಯಕ ಬಾಚು ಮಾರಕ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಗೋಮಾಂಸ ಸೇವನೆ ನಮ್ಮ ಆಹಾರ ಸಂಸ್ಕೃತಿಯ ಭಾಗ. ನನ್ನ ಜನರ ಹಿತಾಸಕ್ತಿಯನ್ನು ಕಾಪಾಡುವವುದು ನನ್ನ ಹೊಣೆಗಾರಿಕೆಯಾಗಿದೆ. ನನ್ನ ಜನರ ಭಾವನೆಗಳನ್ನು ನಾನು ಗೌರವಿಸಲೇಬೇಕು. ಬಿಜೆಪಿಯು ಜಾತ್ಯತೀತೇತರ ಸಿದ್ಧಾಂತವನ್ನು ಹೇರಲು ಯತ್ನಿಸುತ್ತಿದ್ದು, ಅದನ್ನು ಬೆಂಬಲಿಸಲಾರೆ. ಬಿಜೆಪಿ ಕ್ರೈಸ್ತ-ವಿರೋಧಿ ಪಕ್ಷವಾಗಿದೆ ಎಂದು ಗಾರೋ ಬುಡಕಟ್ಟಿಗೆ ಸೇರಿದ ಬಾಚು ಮಾರಕ್ ಹೇಳಿದ್ದಾರೆ.
ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೂರು ವರ್ಷ ಸಂಭ್ರಮಾಚರಣೆ ಸಂದರ್ಭದಲ್ಲಿ ಬಾಚು ಫೆಸ್’ಬುಕ್’ನಲ್ಲಿ ಮಾರಕ್ ಬೀಫ್ ಪಾರ್ಟಿಯ ಪ್ರಸ್ತಾಪ ಮಾಡಿದ್ದರು. ಅದಕ್ಕೆ ಪಕ್ಷದ ಇತರ ನಾಯಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.
ನಾಲ್ಕು ದಿನಗಳ ಹಿಂದೆ ಇದೇ ಕಾರಣಕ್ಕಾಗಿ ಬರ್ನಾರ್ಡ್ ಮಾರ್ಕ್ ಎಂಬ ಬಿಜೆಪಿ ಮುಖಂಡ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.