ಮದ್ರಾಸ್ ರೆಜಿಮೆಂಟ್ ಸೈನಿಕರಿಂದ ಕೆರೆ ಸ್ವಚ್ಛತೆ

Published : Oct 11, 2018, 08:29 AM IST
ಮದ್ರಾಸ್ ರೆಜಿಮೆಂಟ್ ಸೈನಿಕರಿಂದ ಕೆರೆ ಸ್ವಚ್ಛತೆ

ಸಾರಾಂಶ

ಸಾವಿರ ಮಂದಿ ಸೈನಿಕರು ದೋಣಿಗಳನ್ನು ಬಳಸಿ ಕೆರೆಯಲ್ಲಿರುವ ಕಳೆಯನ್ನು ಸ್ವಚ್ಛ ಮಾಡಿದರು. ಕೆರೆಯ ಬದಿಗೆ ಸುರಿಯಲಾದ ಕಟ್ಟಡ ತ್ಯಾಜ್ಯ, ಗೃಹ ತ್ಯಾಜ್ಯ, ಅಪಾಯಕಾರಿ ಆಸ್ಪತ್ರೆ ತ್ಯಾಜ್ಯ ಮತ್ತು ಪ್ಲಾಸ್ಟಿಕ್‌ ತ್ಯಾಜ್ಯದಿಂದ ಕೆರೆಯಿಂದ ಕೊಳೆತ ವಾಸನೆ ಬರುತ್ತಿದ್ದು, ಸಾಂಕ್ರಾಮಿಕ ರೋಗ ಭೀತಿ ಎದುರಾಗಿತ್ತು.ಇದನ್ನ ಸಹ ಸೈನಿಕರು ಸ್ವಚ್ಛಗೊಳಿಸಿದರು.

ಬೆಂಗಳೂರು(ಅ.11): ಕೆರೆ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಬೆಂಗಳೂರು ರಕ್ಷಣಾ ತರಬೇತಿ ಕೇಂದ್ರದ ಮದ್ರಾಸ್‌ ಎಂಜಿನಿಯರ್‌ ಪಡೆ (ಎಂಇಜಿ) ಸೈನಿಕರು ನಗರದ ಹಲಸೂರು ಕೆರೆಯನ್ನು ಸ್ವಚ್ಛಗೊಳಿಸಿದರು.

ಸದಾ ಕಾಲ ನೀರು ಇರುವುದರಿಂದ ಹಲಸೂರು ಕೆರೆಯನ್ನು ಸೈನಿಕರ ತರಬೇತಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆದರೆ ನಗರದ ಕೊಳಚೆ ನೀರು ಪ್ರತಿ ದಿನ ಕೆರೆಗೆ ಸೇರ್ಪಡೆಯಾಗುತ್ತಿರುವುದರಿಂದ ಕೆರೆಯಲ್ಲಿ ಕಳೆ, ಹುಲ್ಲು ಬೆಳೆದು ದುರ್ವಾಸನೆ ಬರುತ್ತಿತ್ತು. ಹೀಗಾಗಿ ಸೇನೆಯು ಮಂಗಳವಾರ ಕೆರೆಯನ್ನು ಸ್ವಚ್ಛಗೊಳಿಸಿತು.

ಸಾವಿರ ಮಂದಿ ಸೈನಿಕರು ದೋಣಿಗಳನ್ನು ಬಳಸಿ ಕೆರೆಯಲ್ಲಿರುವ ಕಳೆಯನ್ನು ಸ್ವಚ್ಛ ಮಾಡಿದರು. ಕೆರೆಯ ಬದಿಗೆ ಸುರಿಯಲಾದ ಕಟ್ಟಡ ತ್ಯಾಜ್ಯ, ಗೃಹ ತ್ಯಾಜ್ಯ, ಅಪಾಯಕಾರಿ ಆಸ್ಪತ್ರೆ ತ್ಯಾಜ್ಯ ಮತ್ತು ಪ್ಲಾಸ್ಟಿಕ್‌ ತ್ಯಾಜ್ಯದಿಂದ ಕೆರೆಯಿಂದ ಕೊಳೆತ ವಾಸನೆ ಬರುತ್ತಿದ್ದು, ಸಾಂಕ್ರಾಮಿಕ ರೋಗ ಭೀತಿ ಎದುರಾಗಿತ್ತು.ಇದನ್ನ ಸಹ ಸೈನಿಕರು ಸ್ವಚ್ಛಗೊಳಿಸಿದರು.

ಕಳೆದ 10 ತಿಂಗಳಿಂದ ನಿರಂತವಾಗಿ ಕೆರೆಯ ಆವರಣವನ್ನು ಸ್ವಚ್ಛತೆ ಮಾಡಲಾಗುತ್ತಿದೆ. ಬಿಬಿಎಂಪಿ ಸೇರಿದಂತೆ ಸ್ಥಳೀಯ ಸಂಸ್ಥೆಗಳು ಕೆರೆ ಸ್ವಚ್ಛತೆಗೆ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಆದರೆ, ಕೆರೆ ಸ್ವಚ್ಛತೆ ಸಂಪೂರ್ಣ ಪ್ರಮಾಣದ ಯಶಸ್ಸು ಸಾಧ್ಯವಾಗಿರಲಿಲ್ಲ. ಅನಿವಾರ್ಯವಾಗಿ ಸೈನಿಕರು ಸ್ವಚ್ಛತಾ ಕಾರ್ಯ ನಡೆಸಿದರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಲೋಕಾಯುಕ್ತ ಬಲೆಗೆ ಬಿದ್ದ ಶಿವಮೊಗ್ಗದ ಭ್ರಷ್ಟ ತಿಮಿಂಗಲ; ಕೈತುಂಬಾ ಚಿನ್ನ, ಕೋಟಿ ಕೋಟಿ ಅಕ್ರಮ ಆಸ್ತಿ ಪತ್ತೆ
ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡದ ಪ್ರತಿ ಸದಸ್ಯರಿಗೆ ಸಿಯೆರಾ ಕಾರು ಗಿಫ್ಟ್ ಕೊಟ್ಟ ಟಾಟಾ