
ಮೆಲ್ಬರ್ನ್(ಸೆ.07): ಹಿಂದುಗಳ ಆರಾಧ್ಯ ದೇವರಾದ ಗಣೇಶನ ಮೂಲಕ ಕುರಿಮರಿಯ ಮಾಂಸವನ್ನು ಪ್ರಚಾರ ಮಾಡುವ ಜಾಹೀರಾತೊಂದು ಆಸ್ಟ್ರೇಲಿಯಾದಲ್ಲಿ ಹಿಂದು ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ.
ಮೀಟ್ ಆ್ಯಂಡ್ ಲೈವ್'ಸ್ಟಾಕ್ ಆಸ್ಟ್ರೇಲಿಯಾ (ಎಮ್'ಎಲ್ಎ) ಎಂಬ ಕಂಪನಿ ಸೆ.4ರಂದು ಈ ಜಾಹೀರಾತನ್ನು ಪ್ರಕಟಿಸಿದೆ.
ಜಾಹೀರಾತಿನಲ್ಲಿ ಗಣೇಶನ ಜೊತೆ ಕ್ರೈಸ್ತ, ಬುದ್ಧ ಮತ್ತಿತರ ದೇವತೆಗಳು ಊಟದ ಟೇಬಲ್ ಮೇಲೆ ಕುಳಿತು, ಕುರಿಮರಿಯ ಮಾಂಸವನ್ನು ನಾವೆಲ್ಲಾ ಸೇವಿಸಬಹುದು ಎಂದು ಮಾತಾಡಿಕೊಳ್ಳುವ ದೃಶ್ಯವಿದೆ.
ಈ ಜಾಹೀರಾತನ್ನು ಕೂಡಲೇ ಹಿಂಪಡೆದುಕೊಳ್ಳಬೇಕು ಎಂದು ಆಸ್ಟ್ರೇಲಿಯಾದಲ್ಲಿನ ಹಿಂದು ಸಮುದಾಯದ ವಕ್ತಾರ ನಿತಿನ್ ವಶಿಷ್ಠ ಆಗ್ರಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.