ಪ್ರತ್ಯೇಕ ಲಿಂಗಾಯತ ಧರ್ಮ: ರಾಯರೆಡ್ಡಿ ಹೇಳಿಕೆಗೆ ಮಾತೆ ಮಹಾದೇವಿ ವಿರೋಧ

By Suvarna Web DeskFirst Published Sep 18, 2017, 11:17 AM IST
Highlights

ಶೈವ ಪದ ತೆಗೆದು ವೀರ- ಲಿಂಗಾಯತ ಎಂದು ಮಾಡಿ ಸ್ವತಂತ್ರ ಧರ್ಮದ ಮಾನ್ಯತೆಗೆ ಯತ್ನಿಸಬೇಕು ಎಂಬ ಸಚಿವ ಬಸವರಾಜ ರಾಯರೆಡ್ಡಿ ಅವರ ಹೇಳಿಕೆಯನ್ನು ಕೂಡಲಸಂಗಮ ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಜಗದ್ಗುರು ಮಾತೆ ಮಹಾದೇವಿ ವಿರೋಧಿಸಿದ್ದಾರೆ.

ಹುನಗುಂದ: ವೀರಶೈವ- ಲಿಂಗಾಯತ ಪ್ರಯೋಗದಲ್ಲಿ ಅನೇಕರು ಶೈವ ಪದವನ್ನು ಇಷ್ಟಪಡುವುದಿಲ್ಲ  ಆದ್ದರಿಂದ ಶೈವ ಪದ ತೆಗೆದು ವೀರ- ಲಿಂಗಾಯತ ಎಂದು ಮಾಡಿ ಸ್ವತಂತ್ರ ಧರ್ಮದ ಮಾನ್ಯತೆಗೆ ಯತ್ನಿಸಬೇಕು ಎಂಬ ಸಚಿವ ಬಸವರಾಜ ರಾಯರೆಡ್ಡಿ ಅವರ ಹೇಳಿಕೆಯನ್ನು ಕೂಡಲಸಂಗಮ ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಜಗದ್ಗುರು ಮಾತೆ ಮಹಾದೇವಿ ವಿರೋಧಿಸಿದ್ದಾರೆ.

ಈ ಧರ್ಮ ಸ್ಥಾಪನೆಯಾಗಿ 900 ವರ್ಷಗಳಾಗಿವೆ. ಇದು ವೀರಶೈವ ಲಿಂಗಾಯತವೂ ಅಲ್ಲ, ವೀರ ಲಿಂಗಾಯತವೂ ಅಲ್ಲ, ಕೇವಲ ಲಿಂಗಾಯತ ಮಾತ್ರ. ಆದ್ದರಿಂದ ಹೊಸ ಶಬ್ದಗಳ ಪ್ರಯೋಗ ಸಮಂಜಸವಲ್ಲ ಎಂದಿದ್ದಾರೆ.

click me!