
ಬೆಂಗಳೂರು(ಆ.07): ಶೀರ್ಷಿಕೆ ವಿವಾದದಿಂದಾಗಿ ಬಿಡುಗಡೆಗೆ ತೊಂದರೆಯಾಗಿದ್ದ ಶಿವರಾಜ್ ಕುಮಾರ್ ಅಭಿನಯದ ಮಾಸ್ ಲೀಡರ್ ಚಿತ್ರಕ್ಕೆ ರಿಲೀಫ್ ಸಿಕ್ಕಿದೆ.
ನರಸಿಂಹ ಚಿತ್ರವನ್ನು ನಿರ್ದೇಶನ ಮಾಡಿದ್ದು, ತರುಣ್ ಶಿವಪ್ಪ ನಿರ್ಮಿಸಿದ್ದರು. ಈ ಹಿಂದೆ ಲೀಡರ್ ಚಿತ್ರದ ಟೈಟಲ್ ನನ್ನ ಎಎಮ್ಆರ್ ರಮೇಶ್ ಅವರು ರಿಜಿಸ್ಟರ್ ಮಾಡಿಸಿದ್ದರು. ಆದರೂ ಶಿವರಾಜ್ ಕುಮಾರ್ ಅಭಿನಯದ ಚಿತ್ರಕ್ಕೆ ಮಾಸ್ ಲೀಡರ್ ಅಂತ ಶಿರ್ಷಿಕೆ ಇಡಲಾಗಿತ್ತು. ಈ ಮಧ್ಯನೇ ಚಿತ್ರದ ಶಿರ್ಷಿಕೆಗೆ ಗೊಂದಲ ಮೂಡಿತ್ತು. ಸದ್ಯ ನಿರ್ಮಾಪಕ ಕೆ. ಮಂಜು ನೇತೃತ್ವದಲ್ಲಿ ಸಮಸ್ಯೆ ಬಗೆಹರಿದಿದ್ದು, ಮಾಸ್ ಲೀಡರ್ ಚಿತ್ರದ ಟೈಟಲ್ ನಿರ್ಮಾಪಕ ತರುಣ್ ಶಿವಪ್ಪಗೆ ಸಿಕ್ಕಿದೆ. ಮಾಸ್ ಲೀಡರ್ ಚಿತ್ರ ಇದೇ 11 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.