ಕೇವಲ 365 ರೂಪಾಯಿಯಲ್ಲಿ ನಡೆಯಿತು ಮದುವೆ!

Published : Dec 18, 2016, 08:35 AM ISTUpdated : Apr 11, 2018, 01:03 PM IST
ಕೇವಲ 365 ರೂಪಾಯಿಯಲ್ಲಿ ನಡೆಯಿತು ಮದುವೆ!

ಸಾರಾಂಶ

ನೋಟ್ ಬ್ಯಾನ್ ಬಿಸಿಯಿಂದ ಹಣ ಹೊಂದಿಸಲಾಗದೆ ದೆಹಲಿಯ ಬ್ರಹ್ಮಾನಾನ್' ಕಾಲೋನಿಯ ರಾಮಕೃಷ್ಣ ಮಂದಿರದಲ್ಲಿ ನಡೆದ ಮದುವೆಯಿಂದ ದಾಖಲೆಯೊಂದು ಆಗಿದೆ. ಈ ಮದುವೆ ದೇವಸ್ಥಾನದಲ್ಲಿ ಸರಳವಾಗಿ ನಡೆದಿದ್ದು, ಬಂದಿದ್ದ ಅತಿಥಿಗಳಿಗೆ ನೀರು ನೀಡಿ ಸ್ವಾಗತಿಲಾಗಿದೆ. ಬಳಿಕ ವಿಧಿವತ್ತಾಗಿ ಮದುವೆ ಮಾಡಿಸಿದ ಐವರು ಪಂಡಿತರು ಕೇವಲ 11 ರೂಪಾಯಿಯನ್ನು ದಕ್ಷಿಣೆಯಾಗಿ ಸ್ವೀಕರಿಸಿದ್ದಾರೆ.

ನವದೆಹಲಿ(ಡಿ.18): ನೋಟ್ ಬ್ಯಾನ್ ಬಿಸಿಯಿಂದ ಹಣ ಹೊಂದಿಸಲಾಗದೆ ದೆಹಲಿಯ ಬ್ರಹ್ಮಾನಾನ್' ಕಾಲೋನಿಯ ರಾಮಕೃಷ್ಣ ಮಂದಿರದಲ್ಲಿ ನಡೆದ ಮದುವೆಯಿಂದ ದಾಖಲೆಯೊಂದು ಆಗಿದೆ. ಈ ಮದುವೆ ದೇವಸ್ಥಾನದಲ್ಲಿ ಸರಳವಾಗಿ ನಡೆದಿದ್ದು, ಬಂದಿದ್ದ ಅತಿಥಿಗಳಿಗೆ ನೀರು ನೀಡಿ ಸ್ವಾಗತಿಲಾಗಿದೆ. ಬಳಿಕ ವಿಧಿವತ್ತಾಗಿ ಮದುವೆ ಮಾಡಿಸಿದ ಐವರು ಪಂಡಿತರು ಕೇವಲ 11 ರೂಪಾಯಿಯನ್ನು ದಕ್ಷಿಣೆಯಾಗಿ ಸ್ವೀಕರಿಸಿದ್ದಾರೆ.

ಶಾಸ್ತ್ರಿ ನಗರ ಕಾಲೋನಿಯ ಸತ್ಯೇಂದ್ರ್ ಸೈನಿ ಹಾಗೂ ಬಿಲ್ಲೂ ಸೈನಿಯ ಮದುವೆ ನಿಶ್ಚಯವಾಗಿತ್ತು. ಆದರೆ ಕ್ಯಾನ್ಸರ್'ನಿಂದ ಬಳಲುತ್ತಿರುವ ಮೋನಿಕಾಳ ತಂದೆ ಕೆಲವೇ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಇಂತಹ ಪರಿಸ್ಥಿತಿಯಲ್ಲಿರುವಾಗಲೇ ನೋಟ್ ಬ್ಯಾನ್ ಬಿಸಿಯೂ ತಟ್ಟಿತ್ತು. ಹೀಗಾಗಿ ವಧುವಿನ ಮನೆಯವರು ಹಣ ಹೊಂದಿಸಲಾಗದ ಕಾರಣ ಮದುವೆಯನ್ನು ಮುಂದೂಡುವಂತೆ ಹುಡುಗನ ಮನೆಯವರಿಗೆ ತಿಳಿಸಿದ್ದರು.

ಇದನ್ನು ಕೇಳಿದ ಊರಿನ ಹಿರಿಯರು ಇಬ್ಬರ ಮನೆಯವರನ್ನೂ ಕರೆಸಿ ಮಾತುಕತೆ ನಡೆಸಿ, ರಾಧಾ ಕೃಷ್ಣ ಮಂದಿರದಲ್ಲಿ ಕೇವಲ 365 ರೂಪಾಯಿ ಖರ್ಚು ಮಾಡಿ ಮದುವೆ ನೆರವೇರಿಸಿದ್ದಾರೆ. ಬಂದ ಅತಿಥಿಗಳಿಗೆ ನೀರು ನೀಡಿ ಸ್ವಾಗತಿಸಿದ್ದಾರೆ. ಈ ಕುರಿತಾಗಿ ಮಾತನಾಡಿದ ವರ 'ನೋಟ್ ಬ್ಯಾನ್'ನಿಂದಾಗಿ ಮದುವೆಗೆ ಹಣ ಹೊಂದಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ನಾವು ಸರಳವಾಗಿ ಮದುವೆಯಾಗಿದ್ದೇವೆ. ನಮ್ಮ ಮದುವೆಯ ಸರಳತೆ ಕುರಿತಾಗಿ ಎಲ್ಲರೂ ಮಾತನಾಡಿ ಹೊಗಳುತ್ತಿದ್ದಾರೆ ಹೀಗಾಗಿ ತುಂಬಾ ಖುಷಿಯಾಗುತ್ತಿಎ' ಎಂದಿದ್ದಾರೆ. .

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಯಚೂರು ಲೋಕಾ ದಾಳಿ, ಎಇಇ ವಿಜಯಲಕ್ಷ್ಮಿ ಮನೆಯಲ್ಲಿ ಸಿಕ್ತು ಲೆಕ್ಕವಿಲ್ಲದಷ್ಟು ಆಸ್ತಿ, ಚಿನ್ನ! ಬೆಳಗ್ಗಿನಿಂದ ಇನ್ನೂ ಮುಗಿಯದ ಶೋಧ!
ಬೆಚ್ಚಿಬಿದ್ದ ಬೆಂಗಳೂರು, ಡಿವೋರ್ಸ್ ಕೇಳಿದ ಪತ್ನಿಯನ್ನು ನಡುರಸ್ತೆಯಲ್ಲಿ ಗುಂಡಿಟ್ಟು ಕೊಂದ ಪತಿ!