
ಬೆಂಗಳೂರು(ಏ. 09): ಮದುವೆ ಹಾಲ್'ನಲ್ಲಿ ಊಟದ ವಿಚಾರವಾಗಿ ಗಲಾಟೆಯಾಗಿ ವಿವಾಹ ಸಮಾರಂಭವೇ ರದ್ದಾಗಿಹೋದ ಘಟನೆ ಕೋಣನಕುಂಟೆಯಲ್ಲಿ ನಡೆದಿದೆ. ಇಲ್ಲಿಯ ಸೌಧಾಮಿನಿ ಛತ್ರದಲ್ಲಿ ಶಿಲ್ಪಾ ಮತ್ತು ನಾಗೇಂದ್ರ ಪ್ರಸಾದ್ ಜೋಡಿಯ ರಿಸೆಪ್ಷನ್ ವೇಳೆ ಈ ಘಟನೆ ನಡೆದಿದೆ. ಇಬ್ಬರ ಮದುವೆ ರದ್ದಾಗಲು ಊಟವೇ ಕಾರಣವೆಂಬ ಪ್ರಾಥಮಿಕ ಮಾಹಿತಿ ಮಾಧ್ಯಮಗಳಿಗೆ ಲಭಿಸಿದೆ.
ವಧು ಶಿಲ್ಪಾ ಅವರ ಕಡೆಯವರು ಹೇಳುವ ಪ್ರಕಾರ, ಆರತಕ್ಷತೆಯಲ್ಲಿ ವರನ ಕಡೆಯ 30 ಜನರಿಗೆ ಊಟ ಕಡಿಮೆಯಾಗಿದೆ. ಇದರಿಂದ ಗಂಡಿನ ಕಡೆಯವರು ದೊಡ್ಡ ಗಲಾಟೆ ಮಾಡಿದ್ದಾರೆ. ಊಟದ ವಿಚಾರವಾಗಿ ಹೀಗೆ ಮಾಡುವವರು ಹುಡುಗಿಯನ್ನು ಕೊಡುವುದು ಬೇಡವೆಂದು ವಧುವಿನ ಕಡೆವರು ಮದುವೆಯನ್ನೇ ರದ್ದು ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.