
ಪಟನಾ: ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ನಕ್ಸಲರು ಬಿಜೆಪಿ ವಿಧಾನಪರಿಷತ್ ಸದಸ್ಯ ರಾಜನ್ ಕುಮಾರ್ ರ ಚಿಕ್ಕಪ್ಪನನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಹೊಸ ತಿರುವು ಲಭಿಸಿದೆ.
ಅಪನಗದೀಕರಣ ವೇಳೆ ರಾಜನ್ ಹಣ ಬದಲಿಸಿಕೊಡುವುದಾಗಿ ತಮ್ಮಿಂದ 5 ಕೋಟಿ ರು. ಪಡೆದು ವಂಚಿಸಿದ್ದಾರೆ ಎಂದು ನಕ್ಸಲರು ಕರಪತ್ರ ಎಸೆದು ಹೋಗಿ ದ್ದಾರೆ. ಅಲ್ಲದೆ, ರಾಜನ್ ಅವರಿಂದ ಒಟ್ಟಾರೆ ತಮಗೆ 7 ಕೋಟಿ ರು. ಬರಬೇಕಿದೆ ಎಂದೂ ತಿಳಿಸಿದ್ದಾರೆ.
ಆದರೆ ಇದನ್ನು ರಾಜನ್ ನಿರಾಕರಿಸಿದ್ದಾರೆ. ಶನಿವಾರ ರಾತ್ರಿ ರಾಜನ್ ಕುಮಾರ್ ಸಿಂಗ್ ಅವರ ಸೂಡಿ ಬಿಗಾಹಾ ಹಳ್ಳಿಯಲ್ಲಿನ ಮನೆಗೆ ಬಂದಿದ್ದ ನಕ್ಸಲರು ಅವರ ಚಿಕ್ಕಪ್ಪ ನರೇಂದ್ರ ಪ್ರಸಾದ್ ಸಿಂಗ್ (65) ಅವರನ್ನು ಹತ್ಯೆ ಮಾಡಿ ಪರಾರಿಯಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.