
ನವದೆಹಲಿ (ನ.18): ಯಾವಾಗಲೂ ರಾಜಕಾರಣಿಗಳನ್ನು ತಮಾಷೆಯಾಗಿ ಕಾಲೆಳೆಯುವ ಬಾಬಾ ರಾಮ್ ದೇವ್ ನೋಟು ನಿಷೇಧದ ಬಗ್ಗೆ ಬಿಜೆಪಿ ಸದಸ್ಯರಿಗೆ ಕಾಲೆಳೆದಿದ್ದಾರೆ.
ನೋಟು ನಿಷೇಧದಿಂದ ಮದುವೆ ಸಮಾರಂಭಗಳಿಗೆ ತೊಂದರೆಯಾಗುತ್ತಿದ್ದು “ಬಿಜೆಪಿಯಲ್ಲಿರುವ ಬಹುತೇಕ ಮಂದಿ ಬ್ರಹ್ಮಚಾರಿಗಳು. ಇದು ಮದುವೆ ಸೀಸನ್ ಎನ್ನುವುದು ಅವರಿಗೆ ಗೊತ್ತಿಲ್ಲವೆಂದು” ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹಾಸ್ಯ ಮಾಡಿದ್ದಾರೆ.
ಈ ನಿರ್ಧಾರವನ್ನು ಇನ್ನೊಂದು ಹದಿನೈದು ದಿನ ಅಥವಾ ಒಂದು ತಿಂಗಳ ನಂತರ ತೆಗೆದುಕೊಂಡಿದ್ದರೆ ಮದುವೆ ಸಮಾರಂಭಗಳ ಮೇಲೆ ಪರಿಣಾಮ ಬೀರುತ್ತಿರಲಿಲ್ಲ ಎಂದಿದ್ದಾರೆ.
ಹಣದ ಅಪಮೌಲ್ಯೀಕರಣದಿಂದ ಆಗಿರುವ ಒಳ್ಳೆಯ ವಿಚಾರವೆಂದರೆ ಇದು ವರದಕ್ಷಿಣೆ ಪಿಡುಗನ್ನು ನಿಲ್ಲಿಸುತ್ತದೆ. ಜನರು ವರದಕ್ಷಿಣೆ ತರುವುದಕ್ಕಾಗಿ ಹಿಂಸೆ ಮಾಡಲಾಗುವುದಿಲ್ಲ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.