ರಾಜಸ್ಥಾನದಿಂದ ಡಾ. ಸಿಂಗ್ ರಾಜ್ಯಸಭೆಗೆ ಸ್ಪರ್ಧೆ ಖಚಿತ!

Published : Aug 11, 2019, 10:47 AM IST
ರಾಜಸ್ಥಾನದಿಂದ ಡಾ. ಸಿಂಗ್ ರಾಜ್ಯಸಭೆಗೆ ಸ್ಪರ್ಧೆ ಖಚಿತ!

ಸಾರಾಂಶ

ಮನಮೋಹನ್‌ ಸಿಂಗ್‌ ರಾಜಸ್ಥಾನದಿಂದ ರಾಜ್ಯಸಭೆಗೆ| ಆ.13ಕ್ಕೆ ನಾಮಪತ್ರ|  ರಾಜ್ಯಸಭೆ ಸದಸ್ಯರಾಗಿದ್ದ ಬಿಜೆಪಿಯ ಮದನ್‌ಲಾಲ್‌ ಸೈನಿ ಅವರ ನಿಧನದಿಂದ ತೆರವಾದ ಸ್ಥಾನ

ನವದೆಹಲಿ[ಆ.11]: ಮಾಜಿ ಪ್ರಧಾನಿ, ಕಾಂಗ್ರೆಸ್‌ ಹಿರಿಯ ನಾಯಕ ಮನಮೋಹನ್‌ ಸಿಂಗ್‌ ಅವರು ರಾಜಸ್ಥಾನದಿಂದ ರಾಜ್ಯಸಭೆ ಪ್ರವೇಶ ಮಾಡುವುದು ಖಚಿತವಾಗಿದ್ದು, ಆ.13ಕ್ಕೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.

ರಾಜ್ಯಸಭೆ ಸದಸ್ಯರಾಗಿದ್ದ ಬಿಜೆಪಿಯ ಮದನ್‌ಲಾಲ್‌ ಸೈನಿ ಅವರ ನಿಧನದಿಂದ ಸ್ಥಾನ ತೆರವಾಗಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಿ ಚುನಾವಣೆ ಆಯೋಜನೆಗೊಂಡಿದೆ.

ಮನಮೋಹನ್‌ ಸಿಂಗ್‌ ಅವರು 28 ವರ್ಷಗಳಿಂದ ಅಸ್ಸಾಂ ಮೂಲಕ ರಾಜ್ಯಸಭೆ ಪ್ರತಿನಿಧಿಸುತ್ತಿದ್ದರು. ಈ ವರ್ಷದ ಆರಂಭದಲ್ಲಿ ಅವರ ರಾಜ್ಯಸಭೆ ಅವಧಿ ಮುಗಿದಿತ್ತು. ಆದರೆ ಅಸ್ಸಾಂನಿಂದ ಸಿಂಗ್‌ರನ್ನು ಆರಿಸುವಷ್ಟುಬಲ ಕಾಂಗ್ರೆಸ್‌ಗೆ ಇಲ್ಲದ ಕಾರಣ ಅವರು ಅಲ್ಲಿ ಕಣಕ್ಕೆ ಇಳಿದಿರಲಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು