ಮೋದಿ ಮುಗಿಸಲು ಪಾಕಿಸ್ತಾನದಲ್ಲಿ ಅಯ್ಯರ್ 'ಸುಪಾರಿ'?

Published : Dec 08, 2017, 06:45 PM ISTUpdated : Apr 11, 2018, 12:59 PM IST
ಮೋದಿ ಮುಗಿಸಲು ಪಾಕಿಸ್ತಾನದಲ್ಲಿ ಅಯ್ಯರ್ 'ಸುಪಾರಿ'?

ಸಾರಾಂಶ

ಪ್ರಧಾನಿ ಮೋದಿ ಬಗ್ಗೆ 'ನೀಚ' ಎಂದು ಪದ ಬಳಕೆ ಮಾಡಿ ಕಾಂಗ್ರೆಸ್.ನಿಂದ ಉಚ್ಚಾಟಿತರಾಗಿರುವ ಮಣಿ ಶಂಕರ್ ಅಯ್ಯರ್ ವಿರುದ್ಧ ಮೋದಿ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರು (ಡಿ.08): ಪ್ರಧಾನಿ ಮೋದಿ ಬಗ್ಗೆ 'ನೀಚ' ಎಂದು ಪದ ಬಳಕೆ ಮಾಡಿ ಕಾಂಗ್ರೆಸ್.ನಿಂದ ಉಚ್ಚಾಟಿತರಾಗಿರುವ ಮಣಿ ಶಂಕರ್ ಅಯ್ಯರ್ ವಿರುದ್ಧ ಮೋದಿ ಗಂಭೀರ ಆರೋಪ ಮಾಡಿದ್ದಾರೆ.

"ನಾನು ಪ್ರಧಾನಿಯಾದ ಸಂದರ್ಭದಲ್ಲಿ ಮಣಿಶಂಕರ್ ಅಯ್ಯರ್ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಭೇಟಿ ಸಂದರ್ಭದಲ್ಲಿ ಮಾತನಾಡುತ್ತಾ, ಮೋದಿಯವರು ಪ್ರಧಾನಿಯಾಗಿರುವವರೆಗೂ ಭಾರತ-ಪಾಕಿಸ್ತಾನ ಸಂಬಂಧ ಉತ್ತಮವಾಗಿರುವುದಿಲ್ಲ. ಅವರನ್ನು ದಾರಿಯಿಂದ ತೆಗೆದುಬಿಡಿ ಎಂದು ಹೇಳಿದ್ದಾರೆ. ಇವರ ಮಾತುಗಳೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿದೆ. ಕಾಂಗ್ರೆಸ್ ಇದನ್ನು ಮುಚ್ಚಿ ಹಾಕಿದ್ದು, ಮಣಿಶಂಕರ್ ಅಯ್ಯರ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

ನಾನೇನು ಅಪರಾಧ ಮಾಡಿದ್ದೇನೆ? ಪ್ರಜಾಪ್ರಭುತ್ವದ ರೀತಿಯಲ್ಲಿ ಜನರು ನನ್ನನ್ನು ಆಯ್ಕೆ ಮಾಡಿದ್ದಾರೆ. ನೀವು ಪಾಕಿಸ್ತಾನಕ್ಕೆ ಹೋಗಿ ಈ ಮನುಷ್ಯನನ್ನು ದಾರಿಯಿಂದ ತೆಗೆದು ಬಿಡಿ ಎನ್ನುತ್ತೀರಿ. ನನ್ನನ್ನು ಮುಗಿಸಲು ಬಯಸಿದ್ದೀರಾ ಎಂದು ಮೋದಿ ಮಣಿಶಂಕರ್ ಅಯ್ಯರ್'ನನ್ನು ಪ್ರಶ್ನಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವ್ಯವಹಾರದ ಬಗ್ಗೆ ಮಾತನಾಡುತ್ತಿದ್ದಾಗಲೇ ಉದ್ಯಮಿಗೆ ಹಠಾತ್ ಹೃದಯಾಘಾತ: ಸಿಪಿಆರ್ ಮಾಡಿ ಜೀವ ಉಳಿಸಿದ ಯುವಕ
ಮಾಟ ಮಂತ್ರ ಪರಿಹಾರದ ನಾಟಕ: ಮಲ್ಲೇಶ್ವರಂನಲ್ಲಿ ಚಿನ್ನಾಭರಣ ದೋಚಿದ ನಕಲಿ ಸ್ವಾಮಿಗಳು!