
ಮಂಡ್ಯ: ಕಸದ ರಾಶಿಯಲ್ಲಿ ಬಿದ್ದಿರೋ ಮಾನಸಿಕ ಅಸ್ವಸ್ಥನಿಗೆ ಶೇವಿಂಗ್ ಮಾಡಿ, ಸ್ನಾನಮಾಡ್ಸಿ, ಹೊಸ ಕಳೆ ನೀಡಿದ ಯುವಕರು ಈ ದೃಶ್ಯಗಳೆಲ್ಲಾ ಕಂಡುಬಂದಿದ್ದು ನಾಗಮಂಗಲದ ಸ್ಟಾರ್ ಪೆಟ್ರೋಲ್ ಬಂಕ್ ಬಳಿ.
ಹೌದು ಕಳೆದ ಒಂದು ತಿಂಗಳಿಂದ ಕಸದರಾಶಿಯಲ್ಲಿ 20ಕ್ಕೂ ಹೆಚ್ಚು ಹಳೆಯ ಶರ್ಟು ಪ್ಯಾಂಟ್ ಗಳನ್ನ ಧರಿಸಿಕೊಂಡು ಆರೋಗ್ಯ ಸರಿಯಿಲ್ಲದೆ ನರಳಾಡುತ್ತಿದ್ದ ಈ ವ್ಯಕ್ತಿಯನ್ನು ಕಂಡ ಸ್ಥಳೀಯ ಯುವಕರು ಆತನಿಗೆ ಮರು ಜೀವ ನೀಡಿದ್ದಾರೆ. ಬ್ಯುಸಿ ಲೈಫ್ ನಡುವೇ ಮಾನವಿಯತೆ ಕಣ್ಮರೆಯಾಗ್ತಿದೆ ಅನ್ನೋ ಮಾತಿನ ಮಧ್ಯೆ ನಾಗಮಂಗಲದ ಯುವಕರ ಈ ಕಾರ್ಯ ಜನರ ಮನಮುಟ್ಟಿದೆ.
"
ತಮಿಳುನಾಡು ಮೂಲದ ಈ ಮಾನಸಿಕ ಅಸ್ವಸ್ಥನ ನರಳಾಟ ಕಂಡು ಸ್ಥಳಕ್ಕಾಗಿಮಿಸಿದ ಶರತ್ ರಾಮಣ್ಣ, ಸಾಧಿಕ್, ಅಕ್ಬರ್ ಪಾಷಾ, ಶಫಿರ್ ಪಾಷಾ ಎಂಬ ಯುವಕರು ಆತ ಧರಿಸಿದ್ದ ಹಳೆ ಬಟ್ಟೆಗಳನ್ನು ಕಳಚಿ. ಆತನಿಗೆ ಕಟಿಂಗ್, ಶೇವಿಂಗ್ ಮಾಡಿಸಿ, ನಂತ್ರ ಸ್ನಾನ ಮಾಡಿಸಿ ಹೊಸ ಬಟ್ಟೆ ತೊಡಿಸಿ ಆರೈಕೆ ಮಾಡಿದ್ದಾರೆ
ಇನ್ನೂ ಈತನಿಗೆ ಬಟ್ಟೆ ಬದಲಿಸುತ್ತಿದ್ದಂತೆ ಆತನಿಗ ಚರ್ಮ ರೋಗ ಇರೋದು ಕಂಡು ಬಂದಿದೆ. ಕೂಡಲೇ ಆತನಿಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಚಿಕಿತ್ಸೆ ನಂತರ ಮಾನಸಿಕ ಅಸ್ವಸ್ಥ ಎಲ್ಲರಂತೆ ಮಾತನಾಡಲು ಶುರುಮಾಡಿದ್ದಾನೆ. ಕಸದ ರಾಶಿಯಲ್ಲಿದ ವ್ಯಕ್ತಿ ಇವನೇನಾ ಎಂದು ಸಹಾಯ ಮಾಡಿದ ಯುವಕರೇ ಆಶ್ಚರ್ಯಕ್ಕೊಳಗಾಗಿದ್ದಾರೆ.
ಇವರ ಈ ಒಂದೊಳ್ಳೆ ಕೆಲಸಕ್ಕೆ ಸಾಮಾಜಿಕ ಜಾಲತಾಣ ಸೇರಿದಂತೆ ಮಂಡ್ಯ ಜಿಲ್ಲೆಯಾಧ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಒಟ್ಟಾರೆ, ಈ ಯುವಕರ ಕೆಲ್ಸ ಪ್ರತಿಯೊಬ್ಬರಿಗೂ ಮಾದರಿ. ಪ್ರತಿಯೊಬ್ಬರೂ ಮಾನಸಿಕ ಅಸ್ವಸ್ಥರನ್ನು ತಾತ್ಸಾರ ಪಡದೇ ಅನುಕಂಪದಿಂದ ಕಂಡು ಸೇವಾಮನೋಭಾವದಿಂದ ನೋಡಿದರೆ ಅದು ನಿಜಕ್ಕೂ ಪುಣ್ಯದ ಕೆಲಸ.
ಕ್ಯಾಮೆರಾ: ಮಹೇಶ್ | ವರದಿ: ನಂದನ್ ರಾಮಕೃಷ್ಣ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.