
ಜೈಪುರ(ಡಿ.21): ತನ್ನ ಇಬ್ಬರೂ ಪತ್ನಿಯರು, ತಾಯಿಯನ್ನು ಸಂತೋಷವಾಗಿ ನೋಡಿಕೊಳ್ಳಲು ವಿಫಲರಾಗಿದ್ದಾರೆ ಎಂದು ಆಕ್ರೋಶಗೊಂಡ ವ್ಯಕ್ತಿಯೊಬ್ಬ, ಇಬ್ಬರು ಪತ್ನಿಯರನ್ನು ಕಾರಿನಲ್ಲಿ ಕೂಡಿಹಾಕಿ ಅವರನ್ನು ಜೀವಂತವಾಗಿ ಸುಟ್ಟುಹಾಕಿದ ಘಟನೆ ರಾಜಸ್ಥಾನದಲ್ಲಿ ಸಂಭವಿಸಿದೆ.
ಹತ್ಯೆಯನ್ನು ಪತಿ ದೀಪಾರಾಮ್ ಒಪ್ಪಿಕೊಂಡಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ದೀಪಾ ರಾಮ್'ಗೆ, ದರಿಯಾ ದೇವಿ (25) ಮತ್ತು ಮಾಲಿ ದೇವಿ (27) ಎಂಬ ಇಬ್ಬರು ಪತ್ನಿಯರು ಇದ್ದರು. ಆದರೆ ಇಬ್ಬರೂ ತಾಯಿಯನ್ನು ಸಂತೋಷವಾಗಿ ನೋಡಿಕೊಳ್ಳಲು ವಿಫಲರಾಗಿದ್ದಾರೆ ಎಂದು ದೀಪಾರಾಮ್'ಗೆ ತೀವ್ರ ಆಕ್ರೋಶ ಇತ್ತು.
ಈ ಹಿನ್ನೆಲೆಯಲ್ಲಿ ಆಭರಣ ಕೊಡಿಸುವುದಾಗಿ ಹೇಳಿ ಇಬ್ಬರನ್ನೂ ಕಾರಿಗೆ ಹತ್ತಿಸಿಕೊಂಡು ದೀಪಾ ರಾಮ್ ಕರದೊಯ್ದಿದ್ದ. ಕಾರಿನಲ್ಲೇ ಆತ ಇಬ್ಬರ ಜೊತೆಗೂ ವಾಗ್ವಾದ ನಡೆಸಿದ್ದ. ಬಳಿಕ ತಾನು ಕಾರಿಂದ ಇಳಿದು, ಕಾರನ್ನು ಲಾಕ್ ಮಾಡಿದ್ದಾನೆ. ನಂತರ ಕಾರಿಗೆ ಬೆಂಕಿ ಹಚ್ಚಿ, ಇಬ್ಬರನ್ನೂ ಜೀವಂತ ಸುಟ್ಟುಹಾಕಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.