ಕರೆಂಟ್ ವೈರ್ ಕದ್ದದ್ದಕ್ಕೆ ಕರೆಂಟ್ ಶಾಕ್ ಕೊಟ್ಟು ಕೊಲೆ ಮಾಡಿದ್ರು!

Published : Aug 22, 2017, 10:38 AM ISTUpdated : Apr 11, 2018, 12:48 PM IST
ಕರೆಂಟ್ ವೈರ್ ಕದ್ದದ್ದಕ್ಕೆ ಕರೆಂಟ್ ಶಾಕ್ ಕೊಟ್ಟು ಕೊಲೆ ಮಾಡಿದ್ರು!

ಸಾರಾಂಶ

ಕರೆಂಟ್ ವೈರ್ ಕದ್ದಿದ್ದಾನೆ ಎಂಬ ಆರೋಪದ ಮೇಲೆ ಯುವಕನಿಗೆ ಕರೆಂಟ್ ಶಾಕ್ ಕೊಟ್ಟು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಮಾರತ್ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪಶ್ಚಿಮಬಂಗಾಳ 20  ವರ್ಷದ ಬಶೀರ್  ಕೊಲೆಯಾದವ. ಮೂರು  ತಿಂಗಳ  ಹಿಂದೆಯಷ್ಟೆ ಪಶ್ಚಿಮಬಂಗಾಳದಿಂದ ನಗರಕ್ಕೆ ಕೆಲಸಕ್ಕೆಂದು ಬಂದಿದ್ದ ಬಶೀರ್ ಹಾಗೂ ಕುಟುಂಬ ಮಾರತ್ ಹಳ್ಳಿಯ  ವಾಗ್ದೇವಿ ಶಾಲೆ ಬಳಿ ವಾಸವಿತ್ತು.

ಬೆಂಗಳೂರು: ಕರೆಂಟ್ ವೈರ್ ಕದ್ದಿದ್ದಾನೆ ಎಂಬ ಆರೋಪದ ಮೇಲೆ ಯುವಕನಿಗೆ ಕರೆಂಟ್ ಶಾಕ್ ಕೊಟ್ಟು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಮಾರತ್ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪಶ್ಚಿಮಬಂಗಾಳ 20  ವರ್ಷದ ಬಶೀರ್  ಕೊಲೆಯಾದವ. ಮೂರು  ತಿಂಗಳ  ಹಿಂದೆಯಷ್ಟೆ ಪಶ್ಚಿಮಬಂಗಾಳದಿಂದ ನಗರಕ್ಕೆ ಕೆಲಸಕ್ಕೆಂದು ಬಂದಿದ್ದ ಬಶೀರ್ ಹಾಗೂ ಕುಟುಂಬ ಮಾರತ್ ಹಳ್ಳಿಯ  ವಾಗ್ದೇವಿ ಶಾಲೆ ಬಳಿ ವಾಸವಿತ್ತು.

ಪೇಪರ್ ಆಯೋ ಕೆಲಸ ಮಾಡುತ್ತಿದ್ದ  ಬಶೀರ್ ಕುಟುಂಬ ಬಸುರೆಡ್ಡಿ ಜಮೀನಿನಲ್ಲಿ ವಾಸವಿತ್ತು. ಜಮೀನಿನಲ್ಲಿ ಹಾದುಹೋಗಿದ್ದ ಕರೆಂಟ್ ವೈರ್  ಕದ್ದಿದ್ದಾನೆ ಎಂದು ಜಮೀನಿನ ಮಾಲೀಕ ಬಸುರೆಡ್ಡಿ ಮತ್ತು ಸ್ನೇಹಿತರು ಇಂದು ಬಶೀರ್’ನನ್ನು ರೂಮಿನೊಳಗೆ ಕೂಡಿ ಹಾಕಿ ಕರೆಂಟ್ ಶಾಕ್ ನೀಡಿ, ದೊಣ್ಣೆಯಿಂದ ಹೊಡೆದು ಕೊಂದಿದ್ದಾರೆಂದು ಎಂಬುದು ಬಶೀರ್ ಕುಟುಂಬಸ್ಥರ ಆರೋಪ.

ಘಟನೆ ಸಂಬಂಧ ಮಾರತ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಾಟಾದ ತಾಜ್‌, ಐಟಿಸಿಗೆ ಅದಾನಿ ಗ್ರೂಪ್ ಟಕ್ಕರ್, ಐಷಾರಾಮಿ ಹೋಟೆಲ್‌ ಉದ್ಯಮಕ್ಕೆ ಎಂಟ್ರಿ, ಏರ್ಪೋರ್ಟ್‌ಗಳೇ ಟಾರ್ಗೆಟ್!
ಬೆಂಗಳೂರು ಕಾಲೇಜಿನಲ್ಲಿ ಹಾಜರಾತಿ ಹಗರಣ; ಅಲಯನ್ಸ್ ವಿವಿ ದೂರು, 6 ಜನರ ವಿರುದ್ಧ ಎಫ್‌ಐಆರ್!