ಬಾಯ್'ಫ್ರೆಂಡ್ಸ್'ಗಿಂತ ನನ್ನ ಗಂಡನೇ ವರ್ಸ್ಟ್; ಡಿವೋರ್ಸ್'ಗೆ ಮಹಿಳೆ ಕೊಟ್ಟ ಕಾರಣ

Published : Jul 27, 2017, 03:37 PM ISTUpdated : Apr 11, 2018, 12:42 PM IST
ಬಾಯ್'ಫ್ರೆಂಡ್ಸ್'ಗಿಂತ ನನ್ನ ಗಂಡನೇ ವರ್ಸ್ಟ್; ಡಿವೋರ್ಸ್'ಗೆ ಮಹಿಳೆ ಕೊಟ್ಟ ಕಾರಣ

ಸಾರಾಂಶ

ನನಗಾಗಿ ತಂದಿಟ್ಟಿದ್ದ ಮೂರು ಸೇಬು ಹಣ್ಣುಗಳನ್ನು ನಿಮ್ಮ ತಾಯಿ(ಪತಿಯ ತಾಯಿ)ತಿಂದಿದ್ದಾರೆ. ಇದರಿಂದಾಗಿ ನನಗೆ ಮಾನಸಿಕವಾಗಿ ಅತ್ಯಂತ ನೋವಾಗಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಯಿಂದ ಬೇಸರಗೊಂಡ ಪತಿ ವಿಚ್ಛೇದನ ಕೋರಿ ನಗರದ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಪ್ರಕರಣ ವಿಚಾರಣಾ ಹಂತದಲ್ಲಿದೆ.

ಬೆಂಗಳೂರು: ವರದಕ್ಷಿಣೆ ಕಿರುಕುಳ, ಪತಿಯಿಂದ ಮಾನಸಿಕ ಹಾಗೂ ದೈಹಿಕ ಹಿಂಸೆ, ಅನೈತಿಕ ಸಂಬಂಧದಂತಹ ಕಾರಣಗಳಿಂದ ವಿಚ್ಛೇದನ ಕೋರಿ ನ್ಯಾಯಾಲಯ ಮೆಟ್ಟಿಲೇರುವುದು ಸಾಮಾನ್ಯ. ಆದರೆ, ವಿವಾಹಕ್ಕೂ ಮುನ್ನ ನನಗಿದ್ದ ಬಾಯ್‌'ಫ್ರೆಂಡ್‌'ಗಳಿಗಿಂತ ನೀನು ಅತ್ಯಂತ ವರ್ಸ್ಟ್, ಹೋಪ್‌'ಲೆಸ್ ಫೆಲೊ ಎಂದೆಲ್ಲಾ ಸ್ವಂತ ಪತಿಯನ್ನೇ ನಿಂಧಿಸುವ ಮೂಲಕ ಸಾಫ್ಟ್‌'ವೇರ್ ಕಂಪೆನಿಯಲ್ಲಿ ಎಂಜಿನಿಯರ್ ಆಗಿರುವ ನವ ವಿವಾಹಿತೆಯೊಬ್ಬರು ತಮ್ಮ ವೈವಾಹಿಕ ಸಂಬಂಧ ಕಳಚಿಕೊಳ್ಳಲು ನಾಂದಿ ಹಾಡಿದ್ದಾರೆ.

ಸಾವಿರ ಸುಳ್ಳು ಹೇಳಿ ಮದುವೆ ಮಾಡಬೇಕು ಎಂದು ಹಿರಿಯರು ಹೇಳುತ್ತಾರೆ. ಆದರೆ, ವಿವಾಹಕ್ಕೂ ಮುನ್ನ ನನಗೆ ಇಬ್ಬರು ಬಾಯ್‌'ಫ್ರೆಂಡ್‌ಗಳಿದ್ದರು ಎಂಬ ಅಂಶ ತಿಳಿಸಿದ್ದ ಮಹಿಳೆ ಮದುವೆ ಬಳಿಕ, ನನಗಿದ್ದ ಬಾಯ್‌'ಫ್ರೆಂಡ್‌'ಗಳ ಮುಂದೆ ನೀನು ಏನೂ ಇಲ್ಲ. ನಿನ್ನೊಂದಿಗಿನ ವೈವಾಹಿಕ ಜೀವನ ಅತ್ಯಂತ ನೀರಸವಾಗಿದೆ ಎಂದು ಅವಮಾನಿಸಿದ್ದಾರೆ.

ಅಲ್ಲದೆ, ನನಗಾಗಿ ತಂದಿಟ್ಟಿದ್ದ ಮೂರು ಸೇಬು ಹಣ್ಣುಗಳನ್ನು ನಿಮ್ಮ ತಾಯಿ(ಪತಿಯ ತಾಯಿ)ತಿಂದಿದ್ದಾರೆ. ಇದರಿಂದಾಗಿ ನನಗೆ ಮಾನಸಿಕವಾಗಿ ಅತ್ಯಂತ ನೋವಾಗಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಯಿಂದ ಬೇಸರಗೊಂಡ ಪತಿ ವಿಚ್ಛೇದನ ಕೋರಿ ನಗರದ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಪ್ರಕರಣ ವಿಚಾರಣಾ ಹಂತದಲ್ಲಿದೆ.

ಪ್ರಕರಣದ ಹಿನ್ನೆಲೆ:
ಜಾಲಹಳ್ಳಿಯ ರವೀಶ್ ಎಂಬುವರು ಖಾಸಗಿ ಐಟಿ ಕಂಪೆನಿಯಲ್ಲಿ ಕಂಪ್ಯೂಟರ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಅದೇ ಕಂಪೆನಿಯಲ್ಲಿ ಸಾಫ್ಟ್'ವೇರ್ ಎಂಜಿನಿಯರ್ ರಕ್ಷಿತಾ(ಇಬ್ಬರ ಹೆಸರು ಬದಲಾಯಿಸಲಾಗಿದೆ) ಎಂಬುವರ ಪರಿಚಯವಾಗುತ್ತದೆ. ದಿನಗಳು ಕಳೆದಂತೆ ಪರಿಚಯ ಪ್ರಮೇಕ್ಕೆ ತಿರುಗುತ್ತದೆ. ನಂತರ ಪೋಷಕ ಒಪ್ಪಿಗೆ ಪಡೆದು 2016ರ ಜನವರಿಯಲ್ಲಿ ವಿವಾಹವಾಗುತ್ತಾರೆ.

ವಿವಾಹವಾದ ಬಳಿಕ ರವೀಶ್ ಗೋವಾ, ಮಡಿಕೇರಿ, ಊಟಿ, ಚಿಕ್ಕಮಗಳೂರು ಸೇರಿದಂತೆ ವಿವಿಧ ಭಾಗಗಳಿಗೆ ಪ್ರವಾಸ ಕೈಗೊಳ್ಳುವ ಮೂಲಕ ರಕ್ಷಿತಾರನ್ನು ತೃಪ್ತಿಪಡಿಸಲು ಸಾಕಷ್ಟು ಪ್ರಯತ್ನ ಮಾಡಿದ್ದರು. ಈ ಪ್ರವಾಸಗಳ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳುವ ಶೈಕ್ಷಣಿಕ ಪ್ರವಾಸದಂತಿದೆ. ಮಧುಚಂದ್ರಕ್ಕಾಗಿ ವಿದೇಶಕ್ಕೆ ಹೋಗಬೇಕು ಎಂದು ನನ್ನ ಬಯಕೆಯಾಗಿತ್ತು. ಆದರೆ, ಒಮ್ಮೆಯೂ ವಿದೇಶ ಪ್ರವಾಸ ಹೋಗಲು ಅವಕಾಶ ಕಲ್ಪಿಸಿಲ್ಲ. ಮದುವೆಗೆ ಮುನ್ನ ಪಬ್ ಮತ್ತು ನೈಟ್ ಕ್ಲಬ್‌ಗೆ ಹೋಗುತ್ತಿದ್ದೆ. ಆದರೆ, ಈಗ ಇದಕ್ಕೆ ಅವಕಾಶ ನೀಡುತ್ತಿಲ್ಲ.

ನಿಮಗೆ ಪಾಶ್ಚಿಮಾತ್ಯ ಸಂಸ್ಕೃತಿ ಅರಿವಿಲ್ಲ. ನಿಮ್ಮೊಂದಿಗೆ ಜೀವನ ಕಷ್ಟ ಸಾಧ್ಯ ಎಂದು ಸಂಬಂಧಿಕರು ಹಾಗೂ ಸ್ನೇಹಿತ ಮುಂದೆ ಅವಮಾನ ಮಾಡುತ್ತಿದ್ದರು. ಜತೆಗೆ ಪ್ರತೀದಿನ ಮಾನಸಿಕ ಹಿಂಸೆ ನೀಡುತ್ತಿದ್ದರು ಇದರಿಂದ ತಪ್ಪಿಸಿಕೊಳ್ಳಲು ನಿದ್ದೆ ಮಾತ್ರೆ ಸೇವಿಸಿ ಮಲಗುವಂತಾಗಿತ್ತು. ಆದ್ದರಿಂದ ವಿಚ್ಛೇದ ಮಂಜೂರು ಮಾಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಪ್ರಸಕ್ತ ಐಟಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವವರಿಂದ ಹೆಚ್ಚು ವಿಚ್ಛೇದನ ಅರ್ಜಿಗಳು ಕೌಟುಂಬಿಕ ನ್ಯಾಯಾಲಯದಲ್ಲಿ ದಾಖಲಾಗುತ್ತಿವೆ. ಸಣ್ಣ, ಪುಟ್ಟ ಕಾರಣಗಳಿಗೂ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗುತ್ತಿವೆ. ಈ ಬೆಳವಣಿಗೆ ಸಂಪ್ರದಾಯಸ್ಥ ಕುಟುಂಬದವರಿಗೆ ಆತಂಕವನ್ನು ಸೃಷ್ಟಿಸುವಂತಾಗಿದೆ.
- ಎಂ.ಆರ್. ಬಾಲಕೃಷ್ಣ, ಅರ್ಜಿದಾರರ ಪರ ವಕೀಲ

ವರದಿ: ರಮೇಶ್ ಬನ್ನಿಕುಪ್ಪೆ, ಕನ್ನಡಪ್ರಭ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಉಡುಪಿ: ವರನಿಗೆ ರಜೆ ಸಿಗದ ಕಾರಣ ವಿಡಿಯೋ ಮೂಲಕ ಅದ್ಧೂರಿ ನಿಶ್ಚಿತಾರ್ಥ! ಫೋಟೋ ಇಲ್ಲಿವೆ ನೋಡಿ
ಕಡಿಮೆ ಬಿಯರ್ ಉತ್ಪಾದನೆಗೆ ಯುಬಿ ಕಂಪನಿಗೆ ವಿಧಿಸಿದ್ದ 29 ಕೋಟಿ ರೂ. ದಂಡ ರದ್ದು!