ಚಿಲ್ಲರೆ ಇಲ್ಲದ ಗಾಯಾಳು ರಕ್ತ ಸಿಗದೆ ಪ್ರಾಣವನ್ನೇ ಕಳೆದುಕೊಂಡ!

Published : Nov 12, 2016, 04:41 AM ISTUpdated : Apr 11, 2018, 01:08 PM IST
ಚಿಲ್ಲರೆ ಇಲ್ಲದ ಗಾಯಾಳು ರಕ್ತ ಸಿಗದೆ ಪ್ರಾಣವನ್ನೇ ಕಳೆದುಕೊಂಡ!

ಸಾರಾಂಶ

ನಿನ್ನೆ ಸಂಜೆ ರಾಜುಗೆ ನೆಲಮಂಗಲದಲ್ಲಿ ಅಪಘಾತವಾಗಿತ್ತು. ಕೂಡಲೇ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆತಂದು ದಾಖಲಿಸಲಾಯಿತು. ರಾಜುಗೆ ರಕ್ತದ ಅಗತ್ಯವಿದ್ದ ಹಿನ್ನೆಲೆಯಲ್ಲಿ ಸಂಬಂಧಿಕರು  ವಿಕ್ಟೋರಿಯಾ ಆಸ್ಪತ್ರೆಯ ಬ್ಲಡ್ ಬ್ಯಾಂಕ್'​ಗೆ ಹೋಗಿ 1000 ರೂ ನೋಟು ಕೊಟ್ಟು ರಕ್ತದ ಬಾಟಲು ಕೇಳಿದ್ದಾರೆ. ಆದರೆ ಬ್ಲಡ್ ಬ್ಯಾಂಕ್ ಸಿಬ್ಬಂದಿ ಈ ನೋಟು ಬೇಡ ಚಿಲ್ಲರೆ ಕೊಡಿ ಎಂದಿದ್ದಾರೆ ಎನ್ನಲಾಗಿದೆ. ಬಳಿಕ ಸಂಬಂಧಿಕರು ಎಂ. ಎಸ್. ರಾಮಯ್ಯ ಆಸ್ಪತ್ರೆ ಬ್ಲಡ್ ಬ್ಯಾಂಕ್​'ಗೆ ಹೋದಾಗ ಅಲ್ಲೂ ಹೀಗೇ ಆಗಿದೆ. ಆದರೆ ಅಷ್ಟೊತ್ತಿಗಾಗಲೇ ರಾಜು ಸಕಾಲಕ್ಕೆ ರಕ್ತ ಸಿಗದೇ ಮೃತಪಟ್ಟಿದ್ದಾರೆ.

ಬೆಂಗಳೂರು(ನ.12): ಚಿಲ್ಲರೆ ಕೊಡದ ಕಾರಣಕ್ಕಾಗಿ ಸಕಾಲದಲ್ಲಿ ರಕ್ತ ಸಿಗದೇ ಅಪಘಾತಕ್ಕೊಳಗಾಗಿದ್ದ ವ್ಯಕ್ತಿ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನೆಲಮಂಗಲದ ನಿವಾಸಿ 33 ವರ್ಷದ ರಾಜು ಎಂಬ ವ್ಯಕ್ತಿ ರಕ್ತ ಸಿಗದೇ ಮೃತಪಟ್ಟವರು.

ನಿನ್ನೆ ಸಂಜೆ ರಾಜುಗೆ ನೆಲಮಂಗಲದಲ್ಲಿ ಅಪಘಾತವಾಗಿತ್ತು. ಕೂಡಲೇ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆತಂದು ದಾಖಲಿಸಲಾಯಿತು. ರಾಜುಗೆ ರಕ್ತದ ಅಗತ್ಯವಿದ್ದ ಹಿನ್ನೆಲೆಯಲ್ಲಿ ಸಂಬಂಧಿಕರು  ವಿಕ್ಟೋರಿಯಾ ಆಸ್ಪತ್ರೆಯ ಬ್ಲಡ್ ಬ್ಯಾಂಕ್'​ಗೆ ಹೋಗಿ 1000 ರೂ ನೋಟು ಕೊಟ್ಟು ರಕ್ತದ ಬಾಟಲು ಕೇಳಿದ್ದಾರೆ. ಆದರೆ ಬ್ಲಡ್ ಬ್ಯಾಂಕ್ ಸಿಬ್ಬಂದಿ ಈ ನೋಟು ಬೇಡ ಚಿಲ್ಲರೆ ಕೊಡಿ ಎಂದಿದ್ದಾರೆ ಎನ್ನಲಾಗಿದೆ.

ಬಳಿಕ ಸಂಬಂಧಿಕರು ಎಂ. ಎಸ್. ರಾಮಯ್ಯ ಆಸ್ಪತ್ರೆ ಬ್ಲಡ್ ಬ್ಯಾಂಕ್​'ಗೆ ಹೋದಾಗ ಅಲ್ಲೂ ಹೀಗೇ ಆಗಿದೆ. ಆದರೆ ಅಷ್ಟೊತ್ತಿಗಾಗಲೇ ರಾಜು ಸಕಾಲಕ್ಕೆ ರಕ್ತ ಸಿಗದೇ ಮೃತಪಟ್ಟಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮನೆಗೆ ಮರಳುತ್ತಿದ್ದ ವೈದ್ಯೆ ಹಿಂಬಾಲಿಸಿ ಕಿರುಕುಳ, ಬೆಂಗಳೂರಲ್ಲಿ ತಡರಾತ್ರಿ ಬೆಚ್ಚಿ ಬೀಳಿಸಿದ ಘಟನೆ
ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌