ಉಗ್ರ ಶಿಬಿರಗಳ ಧ್ವಂಸ : ಮಮತಾ ಪ್ರತಿಕ್ರಿಯೆ ಇದು

Published : Feb 26, 2019, 03:59 PM ISTUpdated : Feb 26, 2019, 04:06 PM IST
ಉಗ್ರ ಶಿಬಿರಗಳ ಧ್ವಂಸ : ಮಮತಾ ಪ್ರತಿಕ್ರಿಯೆ ಇದು

ಸಾರಾಂಶ

ಭಾರತೀಯ ವಾಯುಪಡೆ  ಜೈಶ್ ಇ ಮೊಹಮ್ಮದ್ ಉಗ್ರ ಶಿಬಿರಗಳ ಮೇಲೆ ದಾಳಿ ನಡೆಸಿದ್ದು, ಸಂಪೂರ್ಣ ಅಡ್ಡಾ ಧ್ವಂಸ ಮಾಡಲಾಗಿದೆ. ಇದಕ್ಕೆ ಹಲವು ನಾಯಕರು ಭಾರತೀಯ ಸೇನೆಯನ್ನು ಪ್ರಶಂಸಿದ್ದಾರೆ. 

ಕೋಲ್ಕತಾ : ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾರತೀಯ ವಾಯುಪಡೆ  ಉಗ್ರ ಶಿಬಿರಗಳ ಮೇಲೆ ನಡೆಸಿದ ದಾಳಿಯನ್ನು ಪ್ರಶಂಸಿಸಿದ್ದಾರೆ. 

ಭಾರತೀಯ ವಾಯುಪಡೆಯು ಭಾರತದ ಹೆಮ್ಮೆ ಜೈ ಹಿಂದ್ ಎಂದು ಮಮತಾ ಟ್ವೀಟ್ ಮಾಡಿದ್ದಾರೆ. 

ಹಹ್ಹಹ್ಹಾ... ಪಾಕ್‌ ಜನರೇ ಸರ್ಕಾರ, ಸೈನ್ಯದ ಬೆಂಬಲಕ್ಕಿಲ್ಲ!

ಮಂಗಳವಾರ ಬೆಳ್ಳಂಬೆಳಗ್ಗೆ  3.30ರ ಸುಮಾರಿಗೆ ದಾಳಿ ನಡೆಸಿದ್ದು, 300ಕ್ಕೂ ಹೆಚ್ಚು ಉಗ್ರರು ಹತರಾಗಿರುವ ಸಾಧ್ಯತೆ ಇದೆ. 

ಮಿರಾಜ್ 2000 ಯುದ್ಧ ವಿಮಾನ ಬಾಲಾಕೋಟ್ ಉಗ್ರರ ನೆಲೆಯಲ್ಲಿ 1000 ಕೆಜಿ ಬಾಂಬ್ ದಾಳಿ ನಡೆಸಿ ಉಗ್ರರ ಶಿಬಿರಗಳನ್ನು ಧ್ವಂಸ ಮಾಡಿದೆ. 

ಹೀಗಿತ್ತು ಜೋಷ್: ದಾಳಿಗೆ ಹೊರಟಾಗ ಎಲ್ಲಿದ್ರು ಪ್ರಧಾನಿ ಮೋದಿ?

ಫೆ. 14 ರಂದು ಪುಲ್ವಾಮದಲ್ಲಿ ಭಾರತೀಯ ಸೇನಾ ಪಡೆ ಮೇಲೆ ಜೈಶ್ ಇ ಮೊಹಮ್ಮದ್ ಸಂಘಟನೆ ಉಗ್ರರ ಆತ್ಮಹತ್ಯಾ ದಾಳಿಯಲ್ಲಿ 44 ಭಾರತೀಯ ಯೋಧರು ಹುತಾತ್ಮರಾಗಿದ್ದು, ಇದಕ್ಕೆ ಭಾರತೀಯ ವಾಯುಪಡೆ ಪ್ರತ್ಯುತ್ತರ ನೀಡಿದೆ. 

 

PREV
click me!

Recommended Stories

ಥೈಲ್ಯಾಂಡ್‌ನಿಂದ ಚೀಲದಲ್ಲಿ 48 ವಿಷಕಾರಿ ಹಾವನ್ನು ತಂದ ಪ್ರಯಾಣಿಕ; ಇಲ್ಲಿವೆ ಫೋಟೋಗಳು
Bride Calls Off Wedding: ಮದುವೆ ಮಂಟಪದಲ್ಲೇ ವರನ ಅಸಲಿಯತ್ತು ಕಂಡುಹಿಡಿದ ವಧು! ಮದುವೆ ನಿಂತೋಯ್ತು!