ಮೈ ಅಲ್ಲ ಮನಸ್ಸು ನೋಡಿ:ಸಂತ್ರಸ್ತರಿಗೆ ಮಿಡಿದ ಲೈಂಗಿಕ ಕಾರ್ಯಕರ್ತರು!

Published : Aug 22, 2018, 08:19 PM ISTUpdated : Sep 09, 2018, 09:32 PM IST
ಮೈ ಅಲ್ಲ ಮನಸ್ಸು ನೋಡಿ:ಸಂತ್ರಸ್ತರಿಗೆ ಮಿಡಿದ ಲೈಂಗಿಕ ಕಾರ್ಯಕರ್ತರು!

ಸಾರಾಂಶ

ಕೇರಳ ನೆರೆ ಸಂತ್ರಸ್ತರಿಗಾಗಿ ಮಿಡಿದ ಲೈಂಗಿಕ ಕಾರ್ಯಕರ್ತರು! ನೆರೆ ಸಂತ್ರಸ್ತರಿಗಾಗಿ 21 ಸಾವಿರ ರೂ. ಪರಿಹಾರ! ಲೈಂಗಿಕ ಕಾರ್ಯಕರ್ತರಿಂದ 1 ಲಕ್ಷ ರೂ ಸಂಗ್ರಹಿಸುವ ಗುರಿ! ಜನರ ಮೆಚ್ಚುಗೆಗೆ ಪಾತ್ರವಾದ ಲೈಂಗಿಕ ಕಾರ್ಯಕರ್ತರ ನಡೆ  

ಮುಂಬೈ(ಆ.22): ಕೇರಳ ಪ್ರವಾಹಕ್ಕೆ ಇಡೀ ದೇಶ ಮಿಡಿಯುತ್ತಿದೆ. ಸಮಾಜದ ಎಲ್ಲಾ ವರ್ಗದ ಜನ ತಮ್ಮ ಕೈಲಾದಷ್ಟು ಸಹಾಯ ನೆರೆ ಸಂತ್ರಸ್ತರಿಗಾಗಿ ಮಾಡುತ್ತಿದ್ದಾರೆ. ಅದರಂತೆ ಮಹಾರಾಷ್ಟ್ರದ ಲೈಂಗಿಕ ಕಾರ್ಯಕರ್ತರು ಕೂಡ ಪ್ರವಾಹ ಪೀಡಿತ ಕೇರಳಕ್ಕೆ ಧನಸಹಾಯ ಮಾಡಿದ್ದಾರೆ.

ಕೇರಳ ಪ್ರವಾಹ ಸಂತ್ರಸ್ತರಿಗಾಗಿ ಮಹಾರಾಷ್ಟ್ರದ ಲೈಂಗಿಕ ಕಾರ್ಯಕರ್ತರು  21 ಸಾವಿರ ರೂ. ನೆರವು ನೀಡಿದ್ದು, ಮುಂದಿನ ದಿನಗಳಲ್ಲಿ 1 ಲಕ್ಷ ರೂ. ಸಂಗ್ರಹಿಸುವ ಗುರಿ ಹೊಂದಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಸ್ನೇಹಾಲಯ ಎಂಬ ಎನ್ ಜಿಒ ಮುಖ್ಯಸ್ಥ ದೀಪಕ್ ಬುರಮ್, ಕೇರಳ ನೆರೆ ಸಂತ್ರಸ್ತರಿಗಾಗಿ ಲೈಂಗಿಕ ಕಾರ್ಯಕರ್ತರು ತಾವೇ ಖುದ್ದಾಗಿ ಧನಸಹಾಯ ಮಾಡಲು ಮುಂದೆ ಬಂದಿದ್ದಾರೆ ಎಂದು ತಿಳಿಸಿದ್ದಾರೆ. ಈಗಾಗಲೇ ಸುಮಾರು 21 ಸಾವಿರ ರೂ. ಸಂಗ್ರಹಿಸಿರುವ ಇವರು, 1 ಲಕ್ಷ ರೂ. ಸಂಗ್ರಹಿಸಿ ಕೇರಳಕ್ಕೆ ಕಳುಹಿಸುವ ಇರಾದೆ ಹೊಂದಿದ್ದಾರೆ.

ಇನ್ನು ಲೈಂಗಿಕ ಕಾರ್ಯಕರ್ತರು ಪ್ರವಾಹ ಪೀಡಿತ ಜನರಿಗಾಗಿ ಸಹಾಯ ಮಾಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಚೆನ್ನೈನಲ್ಲಿ ಭೀಕರ ಪ್ರವಾಹ ಉಂಟಾದಾಗಲೂ ಕೂಡ ಇವರು 1 ಲಕ್ಷ ರೂ. ಸಂಗ್ರಹಿಸಿದ್ದರು ಎಂದು ಬುರಮ್ ಮಾಹಿತಿ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸೊಂಟಕ್ಕಿಂತ ಕೆಳಗೆ ಮಹಿಳೆಯರು ಚಿನ್ನ ಧರಿಸಬಾರದು ಅಂತಾ ಹೇಳೋದು ಯಾಕೆ? ಶೇ. 99ರಷ್ಟು ಜನರಿಗೆ ಇದು ಗೊತ್ತಿಲ್ಲ!
ಗರ್ಲ್‌ಫ್ರೆಂಡ್ ಜೊತೆ ಒಂದು ದಿನ ಕಳೆಯಲು ರಜೆ ಕೊಡಿ, ಉದ್ಯೋಗಿ ಇಮೇಲ್‌ಗೆ ಮ್ಯಾನೇಜರ್ ಮಾಡಿದ್ದೇನು?