ಕೊನೆಗೂ ರಾಜ್ಯಕ್ಕೆ ನೀರು ಹರಿಸಿದ ಮಹಾರಾಷ್ಟ್ರ

Published : May 13, 2019, 08:12 AM IST
ಕೊನೆಗೂ ರಾಜ್ಯಕ್ಕೆ ನೀರು ಹರಿಸಿದ ಮಹಾರಾಷ್ಟ್ರ

ಸಾರಾಂಶ

ಕೊನೆಗೂ ರಾಜ್ಯಕ್ಕೆ ನೀರು ಹರಿಸಿದ ಮಹಾರಾಷ್ಟ್ರ| ಕೊಯ್ನಾ ಬದಲು ಕಾಳಮ್ಮವಾಡಿಯಿಂದ ಬಿಡುಗಡೆ

ಚಿಕ್ಕೋಡಿ[ಮೇ.13]: ಮಹಾರಾಷ್ಟ್ರ ಕಾಳಮ್ಮವಾಡಿ ಜಲಾಶಯದಿಂದ ಸುಮಾರು 700 ಕ್ಯುಸೆಕ್‌ ನೀರು ದೂಧಗಂಗಾ ನದಿಗೆ ಮೇ 9ರಿಂದಲೇ (ಚಿಕ್ಕೋಡಿ ತಾಲೂಕಿಗೆ) ಹರಿದು ಬರುತ್ತಿದೆ. ಪ್ರತಿ ವರ್ಷ ಡಿಸೆಂಬರ್‌ನಿಂದ ಜೂನ್‌ವರೆಗೆ 4 ಟಿಎಂಸಿ ನೀರು ಬಿಡುವ ಒಪ್ಪಂದದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಹಂತ ಹಂತವಾಗಿ ಕರ್ನಾಟಕಕ್ಕೆ ದೂಧಗಂಗಾ ನದಿಗೆ ನೀರು ಬಿಡುಗಡೆ ಮಾಡಬೇಕು. ಈಗ ಸಣ್ಣ ಅಣೆಕಟ್ಟಾದ ಕಾಳಮ್ಮವಾಡಿ ಜಲಾಶಯದಿಂದ ಮಾತ್ರ ನದಿಗೆ ಹರಿ ಬಿಟ್ಟಿದ್ದು, ಕೊಯ್ನಾದಿಂದ ಯಾವಾಗ ಬಿಡುತ್ತಾರೆ ಎಂಬುವುದೇ ಪ್ರಶ್ನೆಯಾಗಿ ಉಳಿದಿದೆ.

ಕಾಳಮ್ಮವಾಡಿಯಿಂದ ದೂಧಗಂಗಾ ನದಿಗೆ ಬರುವ ನೀರು ಮೇ 9ರಂದು ಚಿಕ್ಕೋಡಿ ತಾಲೂಕಿನ ಕಾರದಗಾ, ಬೇಡಕಿಹಾಳ ತಲುಪಿದೆ. ಶುಕ್ರವಾರ ಸದಲಗಾ ದಾಟಿ ಮಲಿಕವಾಡ ಮತ್ತು ಯಕ್ಸಂಬಾ ತಲುಪಿದ್ದು, ಶನಿವಾರ ಭಾನುವಾರವೂ ನೀರು ಹರಿದು ಬ್ಯಾರೇಜ್‌ನಲ್ಲಿ ಸಂಗ್ರಹಗೊಂಡಿದೆ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸಬೇಕು ಎಂದು ರಾಜ್ಯ ಸರ್ಕಾರ ಮಹಾರಾಷ್ಟ್ರ ಸರ್ಕಾರದ ಜೊತೆ ಮಾತುಕತೆ ನಡೆಸಿದೆ. ಆದರೂ ಕೊಯ್ನಾದಿಂದ ಕೃಷ್ಣಾ ನದಿಗೆ ನೀರು ಹರಿದು ಬರುತ್ತಿಲ್ಲ. ನೀರು ಬಿಡುವ ಯಾವುದೇ ಮಾಹಿತಿಯೂ ನೀರಾವರಿ ಇಲಾಖೆಗೆ ಬಂದಿಲ್ಲ ಎಂದು ಸಣ್ಣ ನೀರಾವರಿ ಇಲಾಖೆ ಸಹಾಯಕ ಅಭಿಯಂತರ ಎಸ್‌.ಎಸ್‌.ಮಕಾನಿ ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

'ಮಹಿಳೆಯರು ಇರೋದು ಗಂಡನ ಜೊತೆ ಮಲಗೋಕೆ ಮಾತ್ರ..' ವಿಜಯೋತ್ಸವ ಭಾಷಣದಲ್ಲಿ ಸಿಪಿಎಂ ನಾಯಕನ ವಿವಾದಿತ ಮಾತು
ಡಿ.16ರಂದು ಮಂಡ್ಯಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ, ಜಿಲ್ಲಾಡಳಿತದಿಂದ ಭರದ ಸಿದ್ದತೆ, ಕಟ್ಟುನಿಟ್ಟಿನ ಭದ್ರತೆ