ಮಹದಾಯಿ ಹೋರಾಟ: ಬಿಜೆಪಿ ನಾಯಕರ ಬೆಂಡೆತ್ತಿದ ಅಮಿತ್ ಶಾ

Published : Dec 26, 2017, 02:16 PM ISTUpdated : Apr 11, 2018, 12:56 PM IST
ಮಹದಾಯಿ ಹೋರಾಟ: ಬಿಜೆಪಿ ನಾಯಕರ ಬೆಂಡೆತ್ತಿದ ಅಮಿತ್ ಶಾ

ಸಾರಾಂಶ

ಚುನಾವಣಾ ಸಮಯದಲ್ಲಿ ಪರಿಸ್ಥಿತಿ ಕೈ ಮೀರಿ ಹೋಗುತ್ತಿರುವುದಕ್ಕೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯ ಉಸ್ತುವಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. 

ಬೆಂಗಳೂರು : ಅತ್ತ ಕಾಂಗ್ರೆಸ್ ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ ತಂದು ಮುಖಭಂಗ ಮಾಡಿಸಿಕೊಂಡ ಬೆನ್ನಲ್ಲೇ, ಇತ್ತ ಮಹದಾಯಿ ವಿಚಾರದಲ್ಲಿ ರಾಜಕೀಯ ಮಾಡಲು ಹೊರಟ ಬಿಜೆಪಿಗೆ ತಕ್ಕ ಶಿಕ್ಷೆಯಾಗುತ್ತಿದೆ. ಎಲ್ಲರೊಡನೆ ಬಗೆಹರಿಸಬೇಕಾದ ವಿಷಯಕ್ಕೆ, ಎಲ್ಲವೂ ಬಗೆಹರಿಯಿತು ಎಂಬಂತೆ ಫೋಸ್ ನೀಡಿದ ರಾಜ್ಯ ಬಿಜೆಪಿಗೆ ಇದೀಗ ಈ ವಿಷಯ ನುಂಗಲಾರದ ತುತ್ತಾಗಿದೆ. ಬಿಜೆಪಿ ಕಚೇರಿ ಮುಂದೆಯೇ ಮಹದಾಯಿ ಹೋರಾಟಗಾರರು ಜಮಾಯಿಸಿದ್ದು, ವಿವಾದಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಕೂಡಲೇ ಸ್ಪಷ್ಟನೆ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ.

ಚುನಾವಣಾ ಸಮಯದಲ್ಲಿ ಪರಿಸ್ಥಿತಿ ಕೈ ಮೀರಿ ಹೋಗುತ್ತಿರುವುದಕ್ಕೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯ ಉಸ್ತುವಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಸೂಕ್ಷ್ಮವಾದ ಈ ವಿಚಾರದಲ್ಲಿ ಬಿಜೆಪಿ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ವಿಫಲವಾಗಿದ್ದು, ಪಕ್ಷದ ರಾಜ್ಯ ಉಸ್ತುವಾರಿಗಳಾದ ಪ್ರಕಾಶ್ ಜಾವೇಡ್‌ಕರ್, ಪಿಯೂಶ್ ಗೋಯಲ್‌ಗೆ ತರಾಟೆ ತೆಗೆದುಕೊಂಡಿದ್ದಾರೆ. 

ಈ ವಿಚಾರದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಅತ್ತ ಗೋವಾ ಪರ ಒಲವು ತೋರಿದರೆ, ಇತ್ತ ಕರ್ನಾಟಕ ಜನತೆಯ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ, ಇತ್ತ ಕರ್ನಾಟಕದ ಪರ ಒಲವು ತೋರಿದರೆ, ಅತ್ತ ಗೋವಾದಲ್ಲಿ ಆಡಳಿತ ನಡೆಸುತ್ತಿರುವ ಮನೋಹರ್ ಪರಿಕರ್ ನೇತೃತ್ವದ ಸರಕಾರದ ಕೆಂಗಣ್ಣಿಗೆ ಗುರಿಯಾಗಬೇಕು. ಈ ಎಲ್ಲವನ್ನೂ ನಿರ್ವಹಿಸಿಕೊಂಡು ಈ ವಿಚಾರವನ್ನು ಬಗೆಹರಿಸಬೇಕೆಂದು ಶಾ ರಾಜ್ಯ ಉಸ್ತುವಾರಿ ಹಾಗೂ ಯಡಿಯೂರಪ್ಪ ಸೂಚಿಸಿದ್ದಾರೆ, ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಬಿಎಂಟಿಸಿ ಫೀಡರ್ ಬಸ್ ಗಿಫ್ಟ್: ಇಲ್ಲಿದೆ ಹೊಸ ಬಸ್‌ಗಳ ವೇಳಾಪಟ್ಟಿ
ದೇಶದಿಂದ ಶಾಶ್ವತವಾಗಿ ಮರೆಯಾಗಲಿದೆ ಎಸಿಸಿ ಸಿಮೆಂಟ್‌ ಕಂಪನಿ!