ಮುಂದಿನ ಆದೇಶದವರೆಗೆ ವಿಶ್ವಾಸಮತ ಬೇಡವೆಂದ ಹೈಕೋರ್ಟ್: ಪಳಿನಿಸ್ವಾಮಿ ಸರ್ಕಾರಕ್ಕೆ ಹಿನ್ನಡೆ

Published : Sep 20, 2017, 09:27 PM ISTUpdated : Apr 11, 2018, 01:07 PM IST
ಮುಂದಿನ ಆದೇಶದವರೆಗೆ ವಿಶ್ವಾಸಮತ ಬೇಡವೆಂದ ಹೈಕೋರ್ಟ್: ಪಳಿನಿಸ್ವಾಮಿ ಸರ್ಕಾರಕ್ಕೆ ಹಿನ್ನಡೆ

ಸಾರಾಂಶ

ಅನರ್ಹತೆ ಪ್ರಶ್ನಿಸಿ 18 ಶಾಸಕರು ಹಾಗೂ ವಿಶ್ವಾಸಮತ ಯಾಚನೆಗೆ ಆದೇಶ ಕೋರಿ ಡಿಎಂಕೆ ಮುಖಂಡ ಎಂ.ಕೆ. ಸ್ಟಾಲಿನ್ ಅರ್ಜಿ ಸಲ್ಲಿಸಿದ್ದರು.

ಚೆನ್ನೈ(ಸೆ.20): ತಾನು ಮುಂದಿನ ದೇಶ ನೀಡುವವರೆಗೂ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸದಂತೆ ಮದ್ರಾಸ್ ಹೈಕೋರ್ಟ್ ಆದೇಶಿಸಿದ್ದ,  ಹಿನ್ನಲೆಯಲ್ಲಿ ಆಡಳಿತರೂಢ ಪಳಿನಿಸ್ವಾಮಿ ಸರ್ಕಾರಕ್ಕೆ ಹಿನ್ನಡೆಯಾಗಿದೆ.

ಅನರ್ಹತೆ ವಿರುದ್ಧ ತಮಿಳುನಾಡಿನ ಅಣ್ಣಾ ಡಿಎಂಕೆ ಟಿಟಿವಿ ದಿನಕರನ್ ಬಣದ 18 ಶಾಸಕರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ  ಹೈಕೋರ್ಟ್ ಸೂಚನೆ ನೀಡಿದೆ. ಈ ಆದೇಶದಿಂದ ಬೇಗ ವಿಶ್ವಾಸಮತ ಸಾಬೀತುಪಡಿಸುವ ಪಳನಿಸ್ವಾಮಿ-ಪನ್ನೀರಸೆಲ್ವಂ ಬಣಗಳಿಗೆ ಭಾರಿ ಹಿನ್ನಡೆಯಾಗಿದೆ.

ಅನರ್ಹತೆ ಪ್ರಶ್ನಿಸಿ 18 ಶಾಸಕರು ಹಾಗೂ ವಿಶ್ವಾಸಮತ ಯಾಚನೆಗೆ ಆದೇಶ ಕೋರಿ ಡಿಎಂಕೆ ಮುಖಂಡ ಎಂ.ಕೆ. ಸ್ಟಾಲಿನ್ ಅರ್ಜಿ ಸಲ್ಲಿಸಿದ್ದರು. ಇವುಗಳನ್ನು ಒಟ್ಟುಗೂಡಿಸಿ ವಿಚಾರಣೆ ನಡೆಸಿದ ನ್ಯಾ. ದೊರೆಸ್ವಾಮಿ ಅವರ ಪೀಠ, ಮುಂದಿನ ವಿಚಾರಣೆಯನ್ನು ಅಕ್ಟೋಬರ್ 4ಕ್ಕೆ ಮುಂದೂಡಿದೆ. ಸ್ಟಾಲಿನ್ ಪರ ಖ್ಯಾತ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದ್ದರು.   

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಹಾರಾಷ್ಟ್ರದಲ್ಲಿ ಬಿಜೆಪಿ ಗೆದ್ದರೂ ಸೂರ್ಯವಂಶಿ ಕುಟುಂಬಕ್ಕೆ ಅಘಾತ, ಆರಕ್ಕೆ 6 ಸದಸ್ಯರಿಗೆ ಸೋಲು
ಬಿಡದಿ ಟೌನ್ ಶಿಪ್ ಜಿದ್ದಿನಿಂದ ಅನುಷ್ಠಾನ ಮಾಡುತ್ತಿಲ್ಲ: ಶಾಸಕ ಎಚ್.ಸಿ.ಬಾಲಕೃಷ್ಣ