ಲಂಚ ಪಾವತಿಸದ್ದಕ್ಕೆ ವಿಳಂಬವಾದ ವಿವಾಹ: ಕೊನೆಗೆ ಮಗುವಿನ ಸಮ್ಮುಖದಲ್ಲೇ ನಡೆಯಿತು ಮದುವೆ

Published : Mar 20, 2017, 11:07 PM ISTUpdated : Apr 11, 2018, 12:41 PM IST
ಲಂಚ ಪಾವತಿಸದ್ದಕ್ಕೆ ವಿಳಂಬವಾದ ವಿವಾಹ: ಕೊನೆಗೆ ಮಗುವಿನ ಸಮ್ಮುಖದಲ್ಲೇ ನಡೆಯಿತು ಮದುವೆ

ಸಾರಾಂಶ

ಮಧ್ಯಪ್ರದೇಶದ ಬೇತುಲ್‌ ಜಿಲ್ಲೆಯಲ್ಲಿ ಭಾನುವಾರ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ದಿವ್ಯಾಂಗ ಜೋಡಿಯೊಂದು ತಮ್ಮ ಐದು ತಿಂಗಳ ಮಗು ವನ್ನು ತೊಡೆಯಲ್ಲಿ ಕೂರಿಸಿಕೊಂಡೇ ವೈವಾಹಿಕ ಜೀವನಕ್ಕೆ ಪಾದಾರ್ಪಣೆಗೈದ ಅಪರೂಪದ ಘಟನೆ ನಡೆದಿದೆ.

ಭೋಪಾಲ್(ಮಾ.21): ಮಧ್ಯಪ್ರದೇಶದ ಬೇತುಲ್‌ ಜಿಲ್ಲೆಯಲ್ಲಿ ಭಾನುವಾರ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ದಿವ್ಯಾಂಗ ಜೋಡಿಯೊಂದು ತಮ್ಮ ಐದು ತಿಂಗಳ ಮಗು ವನ್ನು ತೊಡೆಯಲ್ಲಿ ಕೂರಿಸಿಕೊಂಡೇ ವೈವಾಹಿಕ ಜೀವನಕ್ಕೆ ಪಾದಾರ್ಪಣೆಗೈದ ಅಪರೂಪದ ಘಟನೆ ನಡೆದಿದೆ.

ಘಟನೆ ಹಿನ್ನೆಲೆ: ಬೀತುಲ್‌ನ ಆಲಂಪುರ ಗ್ರಾಮದ ಈ ಜೋಡಿ, ರಾಜ್ಯದ ಅಂತರ್‌ಜಾತಿ ವಿವಾಹ ಪ್ರೋತ್ಸಾಹ ಯೋಜನೆ ಯಡಿ ಕಳೆದ ವರ್ಷವೇ ಮದುವೆಯಾಗಲು ಬಯಸಿತ್ತು. ಈ ಯೋಜನೆಯಡಿ ಮದುವೆಯಾದರೆ 2 ಲಕ್ಷ ರು. ನಗದು ನೀಡಲಾಗುತ್ತದೆ. ಹೀಗಾಗಿ ಜೋಡಿ 2016ರ ಮಾ.6ರಂದು ತಮ್ಮ ಹೆಸರನ್ನು ನೊಂದಾಯಿಸಿತ್ತು. ಜೂ.8ರಂದು ಸಾಮೂಹಿಕ ವಿವಾಹವನ್ನು ಸರ್ಕಾರ ನಿಗದಿ ಮಾಡಿತ್ತು. ವಿವಾಹ ಖಚಿತ ಎಂದು ನಂಬಿದ ಜೋಡಿ ಲೈಂಗಿಕ ಸಂಪರ್ಕ ಬೆಳೆಸಿತ್ತು. ಈ ನಡುವೆ ಮದುವೆ ದಿನ ನಿಗದಿತ ಸ್ಥಳಕ್ಕೆ ಹೋದರೆ ಅಲ್ಲಿ ಅವರ ಹೆಸರೇ ಇರಲಿಲ್ಲ. ಕೇಳಿದರೆ ಅಧಿಕಾರಿಗಳು ಸಬೂಬು ಹೇಳಿ ಕಳುಹಿಸಿದರು. ಕೊನೆಗೆ ಅಧಿಕಾರಿಗಳು ಕೇಳಿದ್ದ 3000 ರು. ಲಂಚ ನೀಡಲು ಸಾಧ್ಯವಾಗದೇ ಹೋಗಿದ್ದಕ್ಕೆ ಜೋಡಿಯ ಹೆಸರನ್ನು ಕೈಬಿಡಲಾಗಿತ್ತು ಎಂಬ ವಿಷಯ ಬೆಳಕಿಗೆ ಬಂದಿತ್ತು.

ಈ ನಡುವೆ ಹುಡುಗಿ ಗರ್ಭ ಧರಿಸಿ ಮಗುವನ್ನು ಹೆತ್ತಿದ್ದಳು. ಇತ್ತೀಚೆಗೆ ಈ ಜೋಡಿ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ತಮ್ಮ ಗೋಳನ್ನು ಹೇಳಿಕೊಂಡಿತ್ತು. ಕೊನೆಗೆ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಜೋಡಿಯ ಹೆಸರನ್ನು ಕಳೆದ ವಾರ ಇದೇ ಯೋಜನೆಯಡಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಸೇರಿಸಲಾಗಿತ್ತು. ಅಲ್ಲಿ ಕೊನೆಗೂ ಜೋಡಿ ವಿವಾಹ ಬಂಧನಕ್ಕೆ ಒಳಪಟ್ಟಿತು. ಕೊನೆಗೆ ಈ ಮದುವೆ ಮಗುವಿನ ಸಮ್ಮುಖದಲ್ಲೇ ನಡೆಯಿತು.

ವರದಿ: ಕನ್ನಡ ಪ್ರಭ

ಚಿತ್ರ ಕೃಪೆ: ಹಿಂದೂಸ್ಥಾನ್ ಟೈ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೈಸೂರು ಅರಮನೆ ದ್ವಾರದ ಬಳಿ ನೈಟ್ರೋಜನ್ ಸಿಲಿಂಡರ್ ಸ್ಫೋಟ; ಓರ್ವ ಸಾವು, ನಾಲ್ವರಿಗೆ ಗಾಯ
ಬೆಂಗಳೂರನ್ನು ರಾಷ್ಟ್ರ ರಾಜಧಾನಿ ಎಂದು ಘೋಷಿಸಿ, ಕಾರಣ ಬಿಚ್ಚಿಟ್ಟ ದೆಹಲಿ ಯುವತಿ