ಬಾಲ್ಯ ವಿವಾಹದಿಂದ ಲವ್ ಜಿಹಾದ್ ತಡೆಯಲು ಸಾಧ್ಯ : ಬಿಜೆಪಿ ಮುಖಂಡ

Published : May 06, 2018, 01:41 PM IST
ಬಾಲ್ಯ ವಿವಾಹದಿಂದ ಲವ್ ಜಿಹಾದ್ ತಡೆಯಲು ಸಾಧ್ಯ : ಬಿಜೆಪಿ ಮುಖಂಡ

ಸಾರಾಂಶ

ಮಧ್ಯ ಪ್ರದೇಶದ ಬಿಜೆಪಿ ಮುಖಂಡ ಗೋಪಾಲ್ ಪರ್ಮಾರ್ ಲವ್ ಜಿಹಾದ್ ಬಗ್ಗೆ ಹೇಳಿಕೆಯೊಂದನ್ನು ನೀಡುವ ಮೂಲಕ ವಿವಾದಕ್ಕೆ ಈಡಾಗಿದ್ದಾರೆ. ಹುಡುಗಿಯರು ತಡವಾಗಿ ವಿವಾಹವಾಗುವುದೇ ಲವ್ ಜಿಹಾದ್ ಗೆ ಕಾರಣ ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.  

ಭೋಪಾಲ್ : ಮಧ್ಯ ಪ್ರದೇಶದ ಬಿಜೆಪಿ ಮುಖಂಡ ಗೋಪಾಲ್ ಪರ್ಮಾರ್ ಲವ್ ಜಿಹಾದ್ ಬಗ್ಗೆ ಹೇಳಿಕೆಯೊಂದನ್ನು ನೀಡುವ ಮೂಲಕ ವಿವಾದಕ್ಕೆ ಈಡಾಗಿದ್ದಾರೆ. 

ಹುಡುಗಿಯರು ತಡವಾಗಿ ವಿವಾಹವಾಗುವುದೇ ಲವ್ ಜಿಹಾದ್ ಗೆ ಕಾರಣ ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.  ಹಿಂದು ಮಹಿಳೆ ಮತ್ತು ಮುಸ್ಲಿಂ ಪುರುಷನ ನಡುವಿನ ಸಂಬಂಧಕ್ಕೆ ಕಾರಣವೇ ಮದುವೆಯನ್ನು ತಡಮಾಡುವುದಾಗಿದೆ ಎಂದಿದ್ದಾರೆ.  

ಆದರೆ ಚಿಕ್ಕ ವಯಸ್ಸಿನಲ್ಲಿ  ವಿವಾಹವಾಗುವುದರಿಂದ ಇಂತಹ ಸಮಸ್ಯೆಯನ್ನು ತಪ್ಪಿಸಬಹುದು ಎಂದು ಹೇಳಿದ್ದಾರೆ.  ಕುಟುಂಬ ಚಿಕ್ಕ ವಯಸ್ಸಿನಲ್ಲಿಯೇ ಮದುವೆಯನ್ನು  ನಿಶ್ಚಯಿಸುವುದರಿಂದ ಲವ್ ಜಿಹಾದ್ ತಡೆಯುವುದಲ್ಲದೇ ಸಂಬಂಧ ಕೊನೆಯವರೆಗೂ ಉಳಿಯುತ್ತದೆ ಎಂದು ಹೇಳಿದ್ದಾರೆ. 

18 ವರ್ಷವಾಗುತ್ತಲೇ ಅನೇಕ ಹುಡಗಿಯರು ಮನೆಯಿಂದ ಓಡಿಹೋಗುತ್ತಾರೆ. ಇಂತವರನ್ನು, ಶಾಲಾ ಹುಡುಗಿಯರನ್ನು ಲವ್ ಜಿಹಾದ್ ಗೆ ಬೀಳಿಸಲು ಕೆಲ ಪುರುಷರು ಕಾಯುತ್ತಿರುತ್ತಾರೆ ಎಂದು ಇದೀಗ ಭಾರೀ ವಿವಾದಕ್ಕೆಡೆ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಶಾಕಿಂಗ್: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಧಗಧಗನೆ ಹೊತ್ತಿ ಉರಿದ 40 ಎಕರೆ ಕಬ್ಬಿನ ಗದ್ದೆ!
ನಟ ರಿಷಬ್ ಶೆಟ್ಟಿ ಹರಕೆ ಕೋಲ ವಿವಾದ, ದೈವದ ಕಟ್ಟುಕಟ್ಟಳೆಯಲ್ಲಿ ಲೋಪವಾಗಿಲ್ಲ: ವಾರಾಹಿ ದೈವಸ್ಥಾನ ಸಮಿತಿ ಸ್ಪಷ್ಟನೆ