
ಹೈದರಾಬಾದ್: ‘ಇಂದು ಬ್ರಾಹ್ಮಣ ಸಮುದಾಯದಲ್ಲಿ ಹುಡುಗಿಯರು ವೇದ ಪಂಡಿತರು, ಅರ್ಚಕರನ್ನು ಮದುವೆಯಾಗಲು ಇಷ್ಟಪಡಲ್ಲರೀ.. ಅವರಿಗೇನಿದ್ದರೂ ಸಾಫ್ಟ್ವೇರ್ ಎಂಜಿನಿಯರ್, ಅಮೆರಿಕ, ಲಂಡನ್ನಲ್ಲಿರುವ ಡಾಕ್ಟರೇ ಬೇಕು ಎಂದು ಹೇಳ್ತಾರಂತೆ’ ಎಂದು ವೈವಾಹಿಕ ಕೇಂದ್ರಗಳಲ್ಲಿ ಕೇಳಿಬರುವ ಸಾಮಾನ್ಯ ಮಾತು. ಇದನ್ನು ಮನಗಂಡಿರುವ ತೆಲಂಗಾಣದ ಕೆ. ಚಂದ್ರಶೇಖರರಾವ್ ಅವರು ಈಗ ವಿಶಿಷ್ಟ ಆಫರ್ ಪ್ರಕಟಿಸಿದ್ದಾರೆ.
ಬ್ರಾಹ್ಮಣ ವೇದ ಪಂಡಿತರು/ಅರ್ಚಕರನ್ನು ಮದುವೆಯಾಗುವ ಕನ್ಯೆಯರಿಗೆ 3 ಲಕ್ಷ ರು. ಇನಾಮು ನೀಡುವುದಾಗಿ ಘೋಷಿಸಲಾಗಿದೆ. ವರನು ಬ್ರಾಹ್ಮಣ ಅರ್ಚಕನಾಗಿದ್ದರೆ, ಸರ್ಕಾರವು ಮದುವೆಯಾಗುವ ಜೋಡಿಯ ಹೆಸರಿನಲ್ಲಿ ಜಂಟಿ ಫಿಕ್ಸೆಡ್ ಡೆಪಾಸಿಟ್ (ಎಫ್ಡಿ) ಖಾತೆ ತೆಗೆದು 3 ಲಕ್ಷ ರು. ನೀಡಲಿದೆ. ಇದರ ಜತೆಗೆ ಈ ಜೋಡಿಯ ಮದುವೆಗೆ 1 ಲಕ್ಷ ರು. ನೀಡಲಾಗುವುದು. ಎಫ್ಡಿ ಇಡಲಾಗಿರುವ ಠೇವಣಿಯು 3 ವರ್ಷದ್ದಾಗಿದ್ದು, ಆ ಬಳಿಕವಷ್ಟೇ ಜೋಡಿಯು ಹಣ ಹಿಂತೆಗೆಯಬಹುದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.