ಸಂಸ್ಕೃತ ಬಂದರಷ್ಟೇ ಸಂತೆಗೆ ಬನ್ನಿ: ತರಕಾರಿ ಹೆಸರು ತಿಳಿದು ತಿನ್ನಿ!

Published : Jun 08, 2019, 06:21 PM IST
ಸಂಸ್ಕೃತ ಬಂದರಷ್ಟೇ ಸಂತೆಗೆ ಬನ್ನಿ: ತರಕಾರಿ ಹೆಸರು ತಿಳಿದು ತಿನ್ನಿ!

ಸಾರಾಂಶ

ಸಂಸ್ಕೃತ ಬಲ್ಲವರಿಗಷ್ಟೇ ಈ ಸಂತೆಗೆ ಪ್ರವೇಶ| ಎಲ್ಲಾ ತರಕಾರಿ ಹೆಸರುಗಳು ಕೇವಲ ಸಂಸ್ಕೃತದಲ್ಲಿ| ಉತ್ತರ ಪ್ರದೇಶ ರಾಜಧಾನಿ ಲಕ್ನೋದಲ್ಲಿರುವ ನಿಶತ್'ಗಂಜ್ ಮಾರುಕಟ್ಟೆ| ಸಂಸ್ಕೃತ ಭಾಷೆಯ ಅಭಿವೃದ್ಧಿಗಾಗಿ ತರಕಾರಿ ಮಾರಾಟಗಾರರಿಂದ ವಿಶಿಷ್ಟ ಪ್ರಯತ್ನ|

ಸಾಂದರ್ಭಿಕ ಚಿತ್ರ

ಲಕ್ನೋ(ಜೂ.08): ಅದು ತರಕಾರಿ ಮಾರುಕಟ್ಟೆ. ಅಲ್ಲಿ ಸಂಸ್ಕೃತದಲ್ಲಿ ಎಲ್ಲಾ ತರಕಾರಿಗಳ ಹೆಸರು ಬರೆಯಲಾಗಿದೆ. ಇಲ್ಲಿ ಎಲ್ಲಾ ವಹಿವಾಟು ಸಂಸ್ಕೃತದಲ್ಲೇ ನಡೆಯುತ್ತದೆ.

ಹೌದು, ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿರುವ ನಿಶತ್'ಗಂಜ್ ತರಕಾರಿ ಮಾರುಕಟ್ಟೆಯಲ್ಲಿ ಎಲ್ಲಾ ತರಕಾರಿ ಹೆಸರುಗಳನ್ನು ಸಂಸ್ಕೃತದಲ್ಲಿ ಬರೆಯಲಾಗಿದೆ.

ಇಲ್ಲಿಗೆ ಬರುವ ಗ್ರಾಹಕರು ಸಂಸ್ಕೃತದಲ್ಲೇ ತರಕಾರಿ ಹೆಸರು ಹೇಳಿ ಕೊಂಡುಕೊಳ್ಳುತ್ತಾರೆ. ಉದಾಹರಣೆಗೆ ಆಲೂಗಡ್ಡೆಗೆ ಆಲೂಕಮ್, ಟೊಮೆಟೋಗೆ ರಕ್ತಫಲಂ, ಹಾಗಲಕಾಯಿಗೆ ಕರ್ವೆಲಾಹ್, ಗಜ್ಜರಿಗೆ ಗುಂಜನಕಮ್ ಹಾಗೂ ಬೆಳ್ಳುಳ್ಳಿಗೆ ಲಶುಮನ್ ಹೀಗೆ ಎಲ್ಲಾ ತರಕಾರಿ ಹೆಸರನ್ನು ಸಂಸ್ಕೃತದಲ್ಲಿ ಬೋರ್ಡ್ ಮೇಲೆ ಬರೆಯಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಮಾರುಕಟ್ಟೆಯ ತರಕಾರಿ ಮಾರಾಟಗಾರ ಸೋನು, ಸಂಸ್ಕೃತ ಭಾಷೆಯನ್ನು ಜನಮಾನಸದಲ್ಲಿ ಜೀವಂತವಾಗಿಡಲು ಮತ್ತು ಭಾಷೆಯ ಬೆಳವಣಿಗೆಗಾಗಿ ತರಕಾರಿ ಹೆಸರುಗಳನ್ನು ಸಂಸ್ಕೃತದಲ್ಲೇ ಬರೆಯಲಾಗಿದೆ ಎನ್ನುತ್ತಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡೆವಿಲ್ ಇನ್ ಟ್ರಬಲ್: ನಟ ದರ್ಶನ್‌ನಿಂದ ಒಂದು ಗನ್ ಕಿತ್ತುಕೊಂಡರೂ ಮತ್ತೊಂದು .22mm ರೈಫಲ್ ಮರೆತ ಪೊಲೀಸರು
Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!