ಕಳೆದುಕೊಂಡಿದ್ದು 5 ಕೋಟಿ, ದೂರು ಕೊಟ್ಟಿದ್ದು ಐದೂವರೆ ಲಕ್ಷಕ್ಕೆ..! 5 ಕೋಟಿ ಕದ್ದಿದ್ದ ನಾಲ್ವರು ಅರೆಸ್ಟ್..!

Published : Sep 24, 2016, 06:32 AM ISTUpdated : Apr 11, 2018, 12:50 PM IST
ಕಳೆದುಕೊಂಡಿದ್ದು 5 ಕೋಟಿ, ದೂರು ಕೊಟ್ಟಿದ್ದು ಐದೂವರೆ ಲಕ್ಷಕ್ಕೆ..! 5 ಕೋಟಿ ಕದ್ದಿದ್ದ ನಾಲ್ವರು ಅರೆಸ್ಟ್..!

ಸಾರಾಂಶ

ಬೆಂಗಳೂರು(ಸೆ.24): ಇದು ಬೆಂಗಳೂರಿನಲ್ಲಿ ನಡೆದ ವಿಚಿತ್ರ ದರೋಡೆ ಪ್ರಕರಣವೊಂದು ದಾಖಲಾಗಿದೆ. ದುಡ್ಡು ಕಳೆದುಕೊಂಡಿದ್ದು 5 ಕೋಟಿಯಾದರು, ದೂರು ಕೊಟ್ಟಿದ್ದು ಮಾತ್ರ ಐದೂವರೆ ಲಕ್ಷಕ್ಕೆ. ಆರೋಪಿಗಳನ್ನು ಬಂಧಿಸಿದರು, ಎಫ್ಐಆರ್ ದಾಖಲಾಗಿಲ್ಲ. ಇದು ಬಹಳಷ್ಟು ಅನುಮಾನಕ್ಕೆ ಕಾರಣವಾಗಿದೆ. 

ಮೂಟೆಯಲ್ಲಿ ಸಾಗಿಸುತ್ತಿದ್ದ 5 ಕೋಟಿ ಕದ್ದಿದ್ದ ನಾಲ್ವರು ಸದ್ಯ ಅರೆಸ್ಟ್ ಆದರೂ ಎಫ್ಐಆರ್ ದಾಖಲಾಗಿರಲಿಲ್ಲ ಯಾಕೆ ..? 5 ಕೋಟಿ ಕಳಕೊಂಡ್ರೂ, ಆತ ಐದೂವರೆ ಲಕ್ಷಕ್ಕೆಷ್ಟೇ ದೂರು ಕೊಟ್ಟಿದ್ದು ಏಕೆ..? 5 ಕೋಟಿ ಕಳೆದುಕೊಂಡಿದ್ದವನು ಯಾರು..? 5 ಕೋಟಿ ಬ್ಲಾಕ್​ ಮನೀನಾ..? ಎಂಬ ಪ್ರಶ್ನೆ ಎದುರಾಗಿದೆ. 

ಇದೇ ತಿಂಗಳು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್​ ಮನೆಯಲ್ಲಿ ಕಳ್ಳತನವಾಗಿತ್ತು, ಅಗ್ರಹಾರ ದಾಸರಹಳ್ಳಿಯ ಮನೆಯಲ್ಲಿ ಮೂಟೆಯಲಿಟ್ಟಿದ್ದ 5 ಕೋಟಿ ಹಣವನ್ನು ಲಪಟಾಯಿಸಲಾಗಿತ್ತು. ಆದರೆ ಅದೇ 16ನೇ ತಾರೀಕು ಲಕ್ಷ್ಮಣ್ ಪುತ್ರ ಪೊಲೀಸರಿಗೆ ಕೇವಲ ಐದೂವರೆ ಲಕ್ಷ ರೂ ಕಳುವಾಗಿದೆ ಎಂದು ದೂರು ಕೊಟ್ಟಿದ್ದರು. 

ಆದರೆ ಈ ಸಂಬಂಧ ಚೇತನ್, ಸುನಿಲ್, ವಾಸು ಸೇರಿ ನಾಲ್ವರಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರೂ, ಎಫ್​ಐಆರ್ ದಾಖಲಿಸಿರಲಿಲ್ಲ.  16ನೇ ತಾರೀಕು ಅರೋಪಿಗಳನ್ನು ಬಂಧಿಸಿದರೂ, ಕೋರ್ಟ್​ಗೆ ತೋರಿಸಲಿಲ್ಲ, ಲಕ್ಷ್ಮಣ್ ಸಿಎಂ ಆಪ್ತ ಎಂಬ ಕಾರಣಕ್ಕೇ ಎಫ್​ಐಆರ್ ದಾಖಲಿಸಲಿಲ್ಲ ಎಂಬ ಶಂಕೆ ವ್ಯಕ್ತವಾಗಿದ್ದು, ಆರೋಪಿಗಳ ಸಂಬಂಧಿಕರು, ಮಾನವ ಹಕ್ಕು ಆಯೋಗದ ಮೊರೆ ಹೋದ ನಂತರ ಪೊಲೀಸರು ಎಫ್​ಐಆರ್ ದಾಖಲಿಸಿ. ನಿನ್ನೆ ರಾತ್ರಿ ಆರೋಪಿಗಳನ್ನು ಕೋರ್ಟ್​ಗೆ ಹಾಜರು ಪಡಿಸಿದ್ದಾರೆ. 

ಲಕ್ಷ್ಮಣ್, ಸಿಎಂ ಸಿದ್ದರಾಮಯ್ಯ ಪರಮಾಪ್ತ ಅಧಿಕಾರಿಗಳಲ್ಲಿ ಒಬ್ಬರಾಗಿದ್ದು, ಸಿದ್ದರಾಮಯ್ಯನವರ ವಾಚ್ ಹಗರಣದಲ್ಲೂ ಲಕ್ಷ್ಮಣ್ ಹೆಸರು ಕೇಳಿಬಂದಿತ್ತು ಎನ್ನಲಾಗಿದೆ. ಸಿಎಂ ಆಪ್ತ ಎಂಬ ಕಾರಣಕ್ಕೇ, ಪೊಲೀಸರು ಆರೋಪಿಗಳನ್ನು ಬಚ್ಚಿಟ್ಟಿದ್ದರಾ..?ಎಫ್​ಐಆರ್ ಹಾಕದೇ 5 ಕೋಟಿ ರಿಕವರಿ ಮಾಡಲು ಮುಂದಾಗಿದ್ದರಾ..? ಎಂಬ ಪ್ರಶ್ನೆಗಳು ಎದುರಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪ್ರಖ್ಯಾತ ಸಿನಿಮಾ ನಟಿ-ನಿರೂಪಕಿ ಜೊತೆ ಆರ್‌ಸಿಬಿ ಮಾಜಿ ಪ್ಲೇಯರ್‌ ಡೇಟಿಂಗ್‌?
ಭಾರಿ ಇಳಿಕೆ ಬಳಿಕ ಶಾಕ್ ಕೊಟ್ಟ ಚಿನ್ನದ ಬೆಲೆ, ಬೆಂಗಳೂರು-ಹೈದರಾಬಾದ್‌ನಲ್ಲಿ 6,500 ರೂ ಏರಿಕೆ