
ನವದೆಹಲಿ (ನ.17): ನೋಟು ಅಪಮೌಲ್ಯೀಕರಣ ಹಾಗೂ ಜನರು ಅನುಭವಿಸುತ್ತಿರಯವ ಸಮಸ್ಯೆಗಳು ಇಂದು ಸಂಸತ್ತಿನಲ್ಲಿ ಪ್ರತಿಧ್ವನಿಸಿವೆ. ಪರಿಣಾಮವಾಗಿ ಲೋಕಸಭೆಯ ಕಲಾಪಗಳನ್ನು ನಾಳೆಯವೆರೆಗೆ ಮುಂದೂಡಲಾಗಿದೆ. ರಾಜ್ಯ ಸಭೆಯ ಕಲಾಪಗಳು ಮಧ್ಯಾಹ್ನದ ಬಳಿಕ ಆರಂಭವಾಗಲಿದೆ.
ಕಲಾಪಗಳು ಆರಂಭವಾಗುತ್ತಿದದಂತೆ ಪ್ರತಿಪಕ್ಷದ ಸಂಸದರು ನೋಟು ಅಪಮೌಲ್ಯೀಕರಣ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕಲಾಪವನ್ನು ಮುಂದೂಡುವಂತೆ ಸಭಾಪತಿಯವರನ್ನು ಕೇಳಿಕೊಂಡಿದ್ದಾರೆ. ಆದರೆ ಕೇಂದ್ರ ಸಚಿವ ಅನಂತ ಕುಮಾರ್ ಸರ್ಕಾರವು ನಿಯಮ 193ರ ಪ್ರಕಾರ, ನೋಟು ಅಪಮೌಲ್ಯೀಕರಣ ಬಗ್ಗೆ ಚರ್ಚಿಸಲು ಸಿದ್ಧವಿದೆ ಎಂದು ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ನಿನ್ನೆ ಪ್ರತಿಪಕ್ಷಗಳು ನೋಟು ಅಪಮೌಲ್ಯೀಕರಣ ಕುರಿತು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದವು.
ಅಧಿವೇಶನದ ಮೊದಲನೇ ದಿನವಾಗಿದ್ದ ನಿನ್ನೆ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿ ಲೋಕಸಭೆಯ ಕಲಾಪಗಳನ್ನು ಮುಂದೂಡಲಾಗಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.