ತುಮಕೂರಿನ ಬ್ಯಾಂಕ್ ಎದುರು 60ಲಕ್ಷ ಕ್ಯಾಷ್ ಇದ್ದ ಸ್ವಿಫ್ಟ್ ಕಾರ್: ಕಾಳಧನವನ್ನು ವಿನಿಮಯ ಮಾಡಿಕೊಟ್ರಾ ಬ್ಯಾಂಕ್ ಮ್ಯಾನೇಜರ್?

Published : Nov 17, 2016, 02:37 AM ISTUpdated : Apr 11, 2018, 01:02 PM IST
ತುಮಕೂರಿನ ಬ್ಯಾಂಕ್ ಎದುರು 60ಲಕ್ಷ ಕ್ಯಾಷ್ ಇದ್ದ ಸ್ವಿಫ್ಟ್ ಕಾರ್: ಕಾಳಧನವನ್ನು ವಿನಿಮಯ ಮಾಡಿಕೊಟ್ರಾ ಬ್ಯಾಂಕ್ ಮ್ಯಾನೇಜರ್?

ಸಾರಾಂಶ

ಖಾಸಗಿ ವ್ಯಕ್ತಿಗೆ ಸೇರಿದ ಕಾರೊಂದರಲ್ಲಿ ಸುಮಾರು 60 ಲಕ್ಷ ರೂ ಮೌಲ್ಯದ 1000 ಹಾಗೂ 500 ರೂ ಮುಖಬೆಲೆಯ ನೋಟು ವಿನಿಮಯಗೊಂಡಿದೆ ಎಂಬ ಅನುಮಾನ ವ್ಯಕ್ತವಾಗಿದೆ.  ಕೆಎ 53, ಎಮ್ ಸಿ 2169 ಸಂಖ್ಯೆ ಸ್ವಿಪ್ಟ್ ಕಾರಿನಲ್ಲಿ ಚೀಲದಲ್ಲಿ ತುಂಬಿಕೊಂಡು ಬಂದು ಹಣವನ್ನು ವಿನಿಮಯ ಮಾಡಿಕೊಳ್ಳಲಾಗಿದೆ.  ಅಲ್ಲದೆ ಕೆಲ ಸಮಯದ ನಂತರ ಪುನಃ  ಅದೇ ಕಾರಿನಲ್ಲಿ ಆ ಹಣ ವಾಪಸ್ಸಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಬೆಂಗಳೂರು(ನ.17): ಕಾಳಧನಿಕರು ಬ್ಯಾಂಕ್ ಅಧಿಕಾರಿಗಳ ಸಂಪರ್ಕ ಇಟ್ಟುಕೊಂಡು ನೇರವಾಗಿ ಕಪ್ಪುಹಣವನ್ನು ವಿನಿಮಯ ಮಾಡಿಕೊಳ್ಳುತಿದ್ದಾರಾ? ಹೌದು, ಎನ್ನುತ್ತಿದೆ ತುಮಕೂರು ಜಿಲ್ಲೆ ಪಾವಗಡದ ಪಟ್ಟಣದ ಕರ್ನಾಟಕ ಬ್ಯಾಂಕ್ ಶಾಖೆಯಲ್ಲಿ ನಿನ್ನೆ ನಡೆದ ಒಂದು ಘಟನೆ.

ಖಾಸಗಿ ವ್ಯಕ್ತಿಗೆ ಸೇರಿದ ಕಾರೊಂದರಲ್ಲಿ ಸುಮಾರು 60 ಲಕ್ಷ ರೂ ಮೌಲ್ಯದ 1000 ಹಾಗೂ 500 ರೂ ಮುಖಬೆಲೆಯ ನೋಟು ವಿನಿಮಯಗೊಂಡಿದೆ ಎಂಬ ಅನುಮಾನ ವ್ಯಕ್ತವಾಗಿದೆ.  ಕೆಎ 53, ಎಮ್ ಸಿ 2169 ಸಂಖ್ಯೆ ಸ್ವಿಪ್ಟ್ ಕಾರಿನಲ್ಲಿ ಚೀಲದಲ್ಲಿ ತುಂಬಿಕೊಂಡು ಬಂದು ಹಣವನ್ನು ವಿನಿಮಯ ಮಾಡಿಕೊಳ್ಳಲಾಗಿದೆ.  ಅಲ್ಲದೆ ಕೆಲ ಸಮಯದ ನಂತರ ಪುನಃ  ಅದೇ ಕಾರಿನಲ್ಲಿ ಆ ಹಣ ವಾಪಸ್ಸಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಯಾವುದೇ ಭದ್ರತಾ ಸಿಬ್ಬಂದಿಗಳು ಹಣ ಸಾಗಿಸುವಾಗ ಇರಲಿಲ್ಲ. ಇದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಆದರೆ ಬ್ಯಾಂಕ್ ಮ್ಯಾನೇಜರ್ ಹೇಳುವ ಪ್ರಕಾರ ತಮಗೆ ಚಿಲ್ಲರೆ ಅವಶ್ಯ ಇರುವುದರಿಂದ ಲೀಡ್ ಬ್ಯಾಂಕಿನಿಂದ ತರಿಸಿಕೊಂಡಿದ್ದೇವೆ ಎಂದಿದ್ದಾರೆ. ಈ ಕಾರು  ಸಿವಿಲ್ ಗುತ್ತಿಗೆದಾರರೊಬ್ಬರಿಗೆ ಸೇರಿದ್ದು ಎಂಬ ಮಾತುಗಳೂ ಈಗ ಕೇಳಿ ಬರುತ್ತಿವೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೋಲಾರ: ಅಪ್ಪ- ಅಮ್ಮನ ವಿಚ್ಚೇಧನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!
ಟೊಯೋಟಾ ಹೈಡ್ರೋಜನ್ ಕಾರು ಮೂಲಕ ಸಂಸತ್‌ಗೆ ಬಂದ ಪ್ರಹ್ಲಾದ್ ಜೋಶಿ, ಇದರ ಲಾಭವೇನು?