ಕುಡಿದ ಅಮಲಿನಲ್ಲಿ ಯುವಕರಿಬ್ಬರ ದಾಂಧಲೆ: ಸಂಚಾರಿ ಪೋಲಿಸರಿಗೆ ಮನಬಂದಂತೆ ಬೈಗುಳ!

Published : Sep 19, 2016, 03:02 PM ISTUpdated : Apr 11, 2018, 01:09 PM IST
ಕುಡಿದ ಅಮಲಿನಲ್ಲಿ ಯುವಕರಿಬ್ಬರ ದಾಂಧಲೆ: ಸಂಚಾರಿ ಪೋಲಿಸರಿಗೆ ಮನಬಂದಂತೆ ಬೈಗುಳ!

ಸಾರಾಂಶ

ಶಿವಮೊಗ್ಗ(ಸೆ.20): ಕುಡಿದ ಅಮಲಿನಲ್ಲಿ ಯುವಕರಿಬ್ಬರು ರಸ್ತೆಯುದ್ದಕ್ಕೂ ಎರ್ರಾಬಿರ್ರಿ ಬೈಕ್ ಚಲಾಯಿಸಿ ಸಂಚಾರಿ ಪೋಲಿಸರಿಗೆ ಮನಬಂದಂತೆ ಬೈಯ್ದು, ಕೊನೆಗೆ ಕೇಸು ಹಾಕಿಸಿ ಕೊಂಡ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. 

ಗೋಪಿ ವೃತ್ತದ ಬಳಿ ಕುಡಿದ ಮತ್ತಿನಲ್ಲಿ ಗಲಾಟೆ ಮಾಡುತ್ತಿದ್ದ ಇಬ್ಬರು ರಸ್ತೆ ಬದಿಯ ಮರಕ್ಕೆ ಜೋತು ಬಿದ್ದು ಟ್ರಾಫಿಕ್ ಪೋಲಿಸರನ್ನು ಇನ್ನಿಲ್ಲದ ಪೇಚಿಗೆ ಸಿಲುಕಿಸಿದ್ದರು. ಈ ಕುಡುಕರ ಹಾವಳಿ ತಾಳಲಾರದೇ ಪೋಲಿಸರು ಹೊಯ್ಸಳ ಕರೆಯಿಸಿ ಪಶ್ಚಿಮ ಸಂಚಾರಿ ಠಾಣೆಗೆ ಕರೆದ್ಯೊಯ್ದು ಡ್ರಂಕ್ ಅಂಡ್ ಡ್ರೈವ್, ಱಷ್ ಡ್ರೈವ್ ಕೇಸುಗಳನ್ನು ಹಾಕಿದ್ದಾರೆ.

ಭದ್ರಾವತಿಯ ಅಕ್ಷಯ್ ಮತ್ತು ಶಿವಮೊಗ್ಗ ನಗರದ ಟ್ಯಾಂಕ್ ಮೊಹಲ್ಲಾದ ರಾಣಾ ಎಂಬುವವರೇ ಇಷ್ಟೆಲ್ಲಾ ರಾದ್ದಾಂತ ಕ್ರಿಯೇಟ್​ ಮಾಡಿದವರು. ನಿನ್ನೆ ನಡೆದ ಈ ಘಟನೆ ಕೆಲಕಾಲ ಸಾರ್ವಜನಿಕರಿಗೆ ಮನರಂಜನೆ ನೀಡಿದ್ದಂತೂ ನಿಜ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜಗತ್ತಿನಲ್ಲಿ ಅತಿಹೆಚ್ಚು ಮದ್ಯಪಾನ ಮಾಡುವ ದೇಶ ಯಾವುದು? ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?
ಸಿಎಂ ಹೇಳಿದ ಮೇಲೂ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಸಲ್ಲ: ಸಚಿವ ಸತೀಶ್‌ ಜಾರಕಿಹೊಳಿ