(ವಿಡಿಯೋ)ಚೆನ್ನೈನ ಮರೀನಾ ಕಡಲ ತೀರದಲ್ಲಿ ಸಾವಿರಕ್ಕೂ ಹೆಚ್ಚು ಸಿಬ್ಬಂದಿಯಿಂದ ತೈಲ ತೆರವು ಕಾರ್ಯ

Published : Feb 02, 2017, 09:50 PM ISTUpdated : Apr 11, 2018, 12:58 PM IST
(ವಿಡಿಯೋ)ಚೆನ್ನೈನ ಮರೀನಾ ಕಡಲ ತೀರದಲ್ಲಿ ಸಾವಿರಕ್ಕೂ ಹೆಚ್ಚು ಸಿಬ್ಬಂದಿಯಿಂದ ತೈಲ ತೆರವು ಕಾರ್ಯ

ಸಾರಾಂಶ

ಕಾಮರಾಜರ್ ಬಂದರಿಗೆ ಹೊಂದಿಕೊಂಡಿರುವ ಕಡಲಿನ ನೀರಿನಲ್ಲಿ ಚೆಲ್ಲಿರುವ ತೈಲವನ್ನು ತೆರವು ಮಾಡುವ ಕಾರ್ಯ ಮುಂದುವರಿದಿದೆ. ಚೆನ್ನೈನ ವಿವಿಧ ಪ್ರಾಧಿಕಾರಗಳ 1025 ಸಿಬ್ಬಂದಿ ಹಾಗೂ ವಿವಿಧ ಸಂಘಟನೆಗಳ  ನೂರಾರು ಸ್ವಯಂಸೇವಕರು ಬಕೆಟ್‌'ಗಳಲ್ಲಿ ತೈಲವನ್ನು ಮೊಗೆದು ತೆರವು ಮಾಡುತ್ತಿದ್ದಾರೆ.

ಚೆನ್ನೈ(ಫೆ.03): ಕಾಮರಾಜರ್ ಬಂದರಿಗೆ ಹೊಂದಿಕೊಂಡಿರುವ ಕಡಲಿನ ನೀರಿನಲ್ಲಿ ಚೆಲ್ಲಿರುವ ತೈಲವನ್ನು ತೆರವು ಮಾಡುವ ಕಾರ್ಯ ಮುಂದುವರಿದಿದೆ. ಚೆನ್ನೈನ ವಿವಿಧ ಪ್ರಾಧಿಕಾರಗಳ 1025 ಸಿಬ್ಬಂದಿ ಹಾಗೂ ವಿವಿಧ ಸಂಘಟನೆಗಳ  ನೂರಾರು ಸ್ವಯಂಸೇವಕರು ಬಕೆಟ್‌'ಗಳಲ್ಲಿ ತೈಲವನ್ನು ಮೊಗೆದು ತೆರವು ಮಾಡುತ್ತಿದ್ದಾರೆ.

ಈವರೆಗೆ ಸುಮಾರು  40ಟನ್‌ ಬಗ್ಗಡನ್ನು ನೀರಿನಿಂದ ಹೊರತೆಗೆಯಲಾಗಿದೆ. ಇನ್ನೂ ತೈಲ ಶೇಖರವಾಗಿರುವ ತೀರದಲ್ಲಿ ಈವರೆಗೆ 20 ಕಡಲಾಮೆಗಳ ಶವಗಳು ಪತ್ತೆಯಾಗಿವೆ. ಅವೆಲ್ಲವೂ ತೈಲದ ಕಾರಣದಿಂದಲೇ ಮೃತಪಟ್ಟಿವೆ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ.

ಜನವರಿ 28ರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಎರಡು ಹಡಗುಗಳ ನಡುವೆ ಡಿಕ್ಕಿ ನಡೆದು, ಒಂದು ಹಡಗಿನಿಂದ (ಟ್ಯಾಂಕರ್‌) ತೈಲ ಸೋರಿಕೆ ಆಗಿತ್ತು. ಕಾಮರಾಜರ್‌ ಬಂದರು ಪ್ರದೇಶ ಮತ್ತು  ಮರೀನಾ ಕಡಲ ತೀರದಲ್ಲಿ ತೈಲ ಶೇಖರವಾಗಿದೆ. ತೀರದಲ್ಲಿರುವ ನೀರಿನ ಮೇಲೆ ಸುಮಾರು ಮೂರ್ನಾಲ್ಕು ಇಂಚು ದಪ್ಪನೆಯ ಪದರದಷ್ಟು ತೈಲ ನಿಂತಿದೆ. ಅಲ್ಲದೆ ಕಡಲ ಕೊರೆತ ತಪ್ಪಿಸಲು ಹಾಕಿರುವ ಕಲ್ಲುಗಳ ಮೇಲೆ ಭಾರಿ ಪ್ರಮಾಣದಲ್ಲಿ ತೈಲ ಅಂಟಿಕೊಂಡಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಡ್ನಿ ಶೂಟಿಂಗ್ ದಾಳಿಗೆ ಪಾಕಿಸ್ತಾನ ಸಂಪರ್ಕ: ಆರೋಪಿ ಲಾಹೋರ್ ಮೂಲದ ನವೀದ್ ಅಕ್ರಮ್; ಫೋಟೋ ವೈರಲ್!
ತುರುವೇಕೆರೆ: ದೇವರ ಮೇಲೆ ಹಾಕಿದ್ದ 500 ಗ್ರಾಂ ಸರ, 10 ಸಾವಿರ ರೂ. ನಗದು ಕದ್ದ ಕಳ್ಳರು!