ಅಧಿಕಾರಿಗಳ ವಿರುದ್ಧ ಕಿರಣ್ ಬೇಡಿ ಗರಂ

Published : Jun 02, 2017, 08:36 PM ISTUpdated : Apr 11, 2018, 12:54 PM IST
ಅಧಿಕಾರಿಗಳ ವಿರುದ್ಧ ಕಿರಣ್ ಬೇಡಿ ಗರಂ

ಸಾರಾಂಶ

ಮೂರು ಖಾಸಗಿ ಕಾಲೇಜು ಹಾಗೂ 4 ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ 4 ಸಂಸ್ಥೆಗಳಲ್ಲಿ ಸ್ನಾತಕ್ಕೋತ್ತರ ವೈದ್ಯಕೀಯ ಕೋರ್ಸ್'ಗೆಂದೇ ಸರ್ಕಾರಿ ಕೋಟಾದಡಿ 159 ಸೀಟುಗಳು ಸೇರಿದಂತೆ ಒಟ್ಟು 314 ಸೀಟುಗಳನ್ನು ಮೀಸಲಿರಿಸಿದ್ದಾರೆ. ಆದರೆ, 7 ಸಂಸ್ಥೆಗಳು ಕೇವಲ 88 ವಿದ್ಯಾರ್ಥಿಗಳಿಗಷ್ಟೇ ಸರ್ಕಾರಿ ಕೋಟಾದಡಿ ಸೀಟು ನೀಡುತ್ತಿದ್ದು, ಉಳಿದ 71 ಸೀಟುಗಳನ್ನು ಒಂದನೇ ಹಾಗೂ ಎರಡನೇ ಸುತ್ತಿನ ಕೌನ್ಸೆಲಿಂಗ್ ಬಳಿಕ ಮ್ಯಾನೇಜ್ಮೆಂಟ್ ಕೋಟಾದಡಿ ನೀಡಿವೆ ಎಂದ ಅವರು ಮೂರನೇ ಸುತ್ತಿನ ಕೌನ್ಸಿಲಿಂಗ್ ನಡೆಸದೇ ವಿದ್ಯಾರ್ಥಿಗಳಿಗೆ ಅನ್ಯಾಯ ಎಸಗಿವೆ ಎಂದು ಕಿಡಿಕಾರಿದರು.

ಪುದುಚೆರಿ(ಜೂ.02): ಮೆಡಿಕಲ್ ಮತ್ತು ದಂತ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸರ್ಕಾರಿ ಸೀಟು ಹಂಚದೇ, ಮ್ಯಾನೇಜ್ಮೆಂಟ್ ಕೋಟಾಗೆ ವರ್ಗಾಯಿಸಿದ್ದ ಪ್ರಕರಣವನ್ನು ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಪತ್ತೆ ಹಚ್ಚಿದ್ದಾರೆ.

ಮೇ 30ರಂದು ಕೇಂದ್ರೀಕೃತ ಪ್ರವೇಶ ಸಮಿತಿ ನಡೆಸುತ್ತಿದ್ದ ಕೌನ್ಸಿಲಿಂಗ್ ವೇಳೆ ದಿಢೀರನೆ ಭೇಟಿ ನೀಡಿದ ಕಿರಣ್​ ಬೇಡಿ, ಸೀಟು ಹಂಚಿಕೆಯಲ್ಲಿನ ಅಕ್ರಮ ಪತ್ತೆ ಹಚ್ಚಿದ್ದರು. ಮೂರು ಖಾಸಗಿ ಕಾಲೇಜು ಹಾಗೂ 4 ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ 4 ಸಂಸ್ಥೆಗಳಲ್ಲಿ ಸ್ನಾತಕ್ಕೋತ್ತರ ವೈದ್ಯಕೀಯ ಕೋರ್ಸ್'ಗೆಂದೇ ಸರ್ಕಾರಿ ಕೋಟಾದಡಿ 159 ಸೀಟುಗಳು ಸೇರಿದಂತೆ ಒಟ್ಟು 314 ಸೀಟುಗಳನ್ನು ಮೀಸಲಿರಿಸಿದ್ದಾರೆ. ಆದರೆ, 7 ಸಂಸ್ಥೆಗಳು ಕೇವಲ 88 ವಿದ್ಯಾರ್ಥಿಗಳಿಗಷ್ಟೇ ಸರ್ಕಾರಿ ಕೋಟಾದಡಿ ಸೀಟು ನೀಡುತ್ತಿದ್ದು, ಉಳಿದ 71 ಸೀಟುಗಳನ್ನು ಒಂದನೇ ಹಾಗೂ ಎರಡನೇ ಸುತ್ತಿನ ಕೌನ್ಸೆಲಿಂಗ್ ಬಳಿಕ ಮ್ಯಾನೇಜ್ಮೆಂಟ್ ಕೋಟಾದಡಿ ನೀಡಿವೆ ಎಂದ ಅವರು ಮೂರನೇ ಸುತ್ತಿನ ಕೌನ್ಸಿಲಿಂಗ್ ನಡೆಸದೇ ವಿದ್ಯಾರ್ಥಿಗಳಿಗೆ ಅನ್ಯಾಯ ಎಸಗಿವೆ ಎಂದು ಕಿಡಿಕಾರಿದರು.

ಈ ಕುರಿತು ನೂರಾರು ಮಂದಿ ಪೋಷಕರು ಮತ್ತು ವಿದ್ಯಾರ್ಥಿಗಳಿಂದ ದೂರು ಬಂದ ಹಿನ್ನೆಲೆಯಲ್ಲಿ, ಕೇಂದ್ರೀಯ ಪ್ರವೇಶ ಸಮಿತಿ ಕಚೇರಿಗೆ ಧಾವಿಸಿದ ಕಿರಣ್​ ಬೇಡಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ್ರು. ಸರ್ಕಾರಿ ಸೀಟುಗಳನ್ನು ಮ್ಯಾನೇಜ್ಮೆಂಟ್ ಕೋಟಾದಡಿ ಖಾಸಗಿ ಕಾಲೇಜು ಸಂಸ್ಥೆಗಳಿಗೆ ನೀಡದೇ ಮೂರನೇ ಸುತ್ತಿನ ಕೌನ್ಸಿಲಿಂಗ್ ನಡೆಸಿ, ಎಲ್ಲ ಸರ್ಕಾರಿ ಸೀಟುಗಳನ್ನು ಹಂಚುವಂತೆ ಆದೇಶಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರು ಕೇಂದ್ರದಲ್ಲಿ ಏರ್‌ಟ್ಯಾಕ್ಸಿ ಪರೀಕ್ಷೆ ಆರಂಭಿಸಿದ ಸರ್ಲಾ ಏವಿಯೇಷನ್‌, 2028ಕ್ಕೆ ಲಾಂಚ್‌
ದುಬೈ ಮರುಭೂಮಿಯಲ್ಲಿ ನಿಗೂಢ ಜೀವಿ ಪತ್ತೆ: ಪ್ರವಾಸಿ ಮಹಿಳೆ ಹಂಚಿಕೊಂಡ ವಿಡಿಯೋ ಭಾರೀ ವೈರಲ್!