ಬಿಜೆಪಿಗೆ ತಾಕತ್ತಿದ್ದರೆ ಮೂರು ಡೈರಿ ಪ್ರಕರಣಗಳನ್ನು ತನಿಖೆ ನಡೆಸಲಿ: ಉಗ್ರಪ್ಪ ಸವಾಲು

Published : Mar 02, 2017, 07:24 AM ISTUpdated : Apr 11, 2018, 01:09 PM IST
ಬಿಜೆಪಿಗೆ ತಾಕತ್ತಿದ್ದರೆ ಮೂರು ಡೈರಿ ಪ್ರಕರಣಗಳನ್ನು ತನಿಖೆ ನಡೆಸಲಿ: ಉಗ್ರಪ್ಪ ಸವಾಲು

ಸಾರಾಂಶ

ಸಹಾರಾ-ಬಿರ್ಲಾ ಡೈರಿ, ಲೆಹೆರ್ ಸಿಂಗ್ ಡೈರಿ ಹಾಗೂ ಗೋವಿಂದರಾಜು ಡೈರಿ, ಈ ಮೂರು ಪ್ರಕರಣಗಳಲ್ಲಿ ಹಾಲಿ ನ್ಯಾಯಮೂರ್ತಿಯೊಬ್ಬರ ನೇತೃತ್ವದ ಸಮಿತಿಯಿಂದ ಸ್ವತಂತ್ರ ತನಿಖೆ ನಡೆಸುವ ತಾಕತ್ತು ಬಿಜೆಪಿಗೆ ಇದೆಯಾ ಎಂದು ಉಗ್ರಪ್ಪ ಸವಾಲೆಸೆದಿದ್ದಾರೆ.

ಬೆಂಗಳೂರು(ಮಾ. 02): ಕಾಂಗ್ರೆಸ್ ಎಂಎಲ್'ಸಿ ಗೋವಿಂದರಾಜು ಅವರದ್ದೆನ್ನಲಾದ ಡೈರಿಯು ಬರೀ ಬಿಜೆಪಿಯ ಸೃಷ್ಟಿ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಆಪಾದಿಸಿದ್ದಾರೆ. ಯಡಿಯೂರಪ್ಪನವರಂಥ ಭ್ರಷ್ಟರು ಈ ರಾಜ್ಯದಲ್ಲಿ ಬೇರಾರಿಲ್ಲ. ಅವರು ಮಾಡುತ್ತಿರುವ ಅರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಉಗ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.

ಸಹಾರಾ-ಬಿರ್ಲಾ ಡೈರಿಯನ್ನು ಪ್ರಸ್ತಾಪಿಸಿದ ಉಗ್ರಪ್ಪ, ಆ ಡೈರಿಯಲ್ಲಿ ಅಂದಿನ ಗುಜರಾತ್ ಸಿಎಂ(ನರೇಂದ್ರ ಮೋದಿ), ಮಧ್ಯಪ್ರದೇಶ ಸಿಎಂ ಮತ್ತು ದೆಹಲಿ ಸಿಎಂ ಅವರಿಗೆ ಹಣ ನೀಡಿರುವುದನ್ನು ನಮೂದಿಸಲಾಗಿದೆ. ಈ ಮೂವರಲ್ಲಿ ಯಾರೂ ಕೂಡ ತಾವು ಹಣ ಪಡೆದಿಲ್ಲ ಎಂದು ಸ್ಪಷ್ಟಪಡಿಸಿಯೇ ಇಲ್ಲ ಎಂದು ಉಗ್ರಪ್ಪ ಹೇಳಿದ್ದಾರೆ.

ಸಹಾರಾ-ಬಿರ್ಲಾ ಡೈರಿ, ಲೆಹೆರ್ ಸಿಂಗ್ ಡೈರಿ ಹಾಗೂ ಗೋವಿಂದರಾಜು ಡೈರಿ, ಈ ಮೂರು ಪ್ರಕರಣಗಳಲ್ಲಿ ಹಾಲಿ ನ್ಯಾಯಮೂರ್ತಿಯೊಬ್ಬರ ನೇತೃತ್ವದ ಸಮಿತಿಯಿಂದ ಸ್ವತಂತ್ರ ತನಿಖೆ ನಡೆಸುವ ತಾಕತ್ತು ಬಿಜೆಪಿಗೆ ಇದೆಯಾ ಎಂದು ಉಗ್ರಪ್ಪ ಸವಾಲೆಸೆದಿದ್ದಾರೆ.

ಸುವರ್ಣನ್ಯೂಸ್ ಜೊತೆ ಮಾತನಾಡುತ್ತಿದ್ದ ವಿಎಸ್ ಉಗ್ರಪ್ಪ, 2010ರಲ್ಲಿ ಈ ಯೋಜನೆಯನ್ನು ಮೊದಲು ಪ್ರಸ್ತಾಪಿಸಿದ್ದ ಅಂದಿನ ಸಿಎಂ ಯಡಿಯೂರಪ್ಪ. ನಗರದ ಟ್ರಾಫಿಕ್ ದಟ್ಟಣೆಯನ್ನು ತಪ್ಪಿಸುವ ಉದ್ದೇಶದಿಂದ ಸಿದ್ದರಾಮಯ್ಯನವರು ಈ ಯೋಜನೆಗೆ ಜೀವ ನೀಡಿದರು ಎಂದು ವಿವರಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರು: 2 ಲಕ್ಷ ಬೆಲೆಯ ಗಿಳಿ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಯುವಕ!
ವಿಮಾನದಲ್ಲಿ ಹೃದಯಾಘಾತ- ಅಮೆರಿಕ ಪ್ರಜೆಯ ಜೀವ ಉಳಿಸಿದ ಡಾ. ಅಂಜಲಿ ನಿಂಬಾಳ್ಕರ್