
ನವದೆಹಲಿ (ಜು. 04): ಸಾಮಾನ್ಯವಾಗಿ ರೈಲುಗಳು ಸಮಯಕ್ಕೆ ಸರಿಯಾಗಿ ಹೊರಡದಿರುವ, ವಿಳಂಬವಾಗಿ ತಲುಪುವ ದೂರುಗಳು ಪ್ರತಿನಿತ್ಯ ಕೇಳುತ್ತಿರುತ್ತೇವೆ. ಆದರೆ, ಇನ್ನುಮುಂದೆ ರೈಲುಗಳು ವಿಳಂಬವಾಗಿ ಹೊರಟರೆ ರೈಲ್ವೆ ಸಿಬ್ಬಂದಿಯ ಬಡ್ತಿಗೇ ಕತ್ತರಿಬೀಳುವ ಸಾಧ್ಯತೆ ಇದೆ. ಇಂತಹ ಒಂದು ಗಂಭೀರ ಎಚ್ಚರಿಕೆಯನ್ನು ರೈಲ್ವೆ ಸಚಿವ ಪೀಯೂಶ್ ಗೋಯಲ್ ಅಧಿಕಾರಿಗಳಿಗೆ ನೀಡಿದ್ದಾರೆ.
ಕಳೆದ ವಾರ ನಡೆದ ಆಂತರಿಕ ಸಭೆಯೊಂದರಲ್ಲಿ ಮಾತನಾಡಿದ ಗೋಯಲ್, ತಮ್ಮ ತಮ್ಮ ವಲಯಗಳಲ್ಲಿ ರೈಲ್ವೆ ಸೇವೆ ವಿಳಂಬವಾದರೆ, ಬಡ್ತಿ ಅವಕಾಶಕ್ಕೆ ತೊಂದರೆಯಾಗ ಲಿದೆ ಎಂದು ಎಲ್ಲ ರೈಲ್ವೆ ವಲಯಗಳ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ.
ಹಿರಿಯ ಅಧಿಕಾರಿ ಗಳನ್ನು ರೈಲು ವಿಳಂಬ ದೂರುಗಳ ಬಗ್ಗೆ ತರಾಟೆಗೆ ತೆಗೆದುಕೊಂಡ ಸಚಿವರು, ನಿರ್ವಹಣೆ ಕಾರಣ ನೀಡಿ ರೈಲು ವಿಳಂಬ ಆಗುವಂತಿಲ್ಲ. ಸಮಯಕ್ಕೆ ಸರಿಯಾಗಿ ರೈಲುಗಳು ಹೊರಡಲು ಮತ್ತು ತಲುಪಲು ಆದ್ಯತೆ ನೀಡಬೇಕು ಎಂದು ಸೂಚಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.