ಧರೆ ಕುಸಿತ: ರಾತ್ರಿ ಇಡೀ ಆ್ಯಂಬುಲೆನ್ಸ್‌ನಲ್ಲಿ ಶವಗಳ ಜತೆ ಕೂತರು!

Published : Aug 12, 2019, 09:40 AM ISTUpdated : Aug 13, 2019, 08:25 AM IST
ಧರೆ ಕುಸಿತ: ರಾತ್ರಿ ಇಡೀ ಆ್ಯಂಬುಲೆನ್ಸ್‌ನಲ್ಲಿ ಶವಗಳ ಜತೆ ಕೂತರು!

ಸಾರಾಂಶ

ಪ್ರವಾಹಕ್ಕೆ ತತ್ತರಿಸಿದ ಕಾಫೀನಾಡು| ಧರೆ ಕುಸಿತ: ರಾತ್ರಿ ಇಡೀ ಆ್ಯಂಬುಲೆನ್ಸ್‌ನಲ್ಲಿ ಶವಗಳ ಜತೆ ಕೂತರು!

ಚಿಕ್ಕಮಗಳೂರು[ಆ.12]: ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ವರುಣನ ರುದ್ರನರ್ತನ ಶವ ಸಂಸ್ಕಾರಕ್ಕೂ ಅಡ್ಡಿಪಡಿಸಿತು. ಮನೆಗೆ ಹೋಗಲು ದಾರಿಯಿಲ್ಲದೆ ಇಡೀ ರಾತ್ರಿ ತಾಯಿ ಮತ್ತು ಮಗನ ಮೃತದೇಹಗಳು ಆ್ಯಂಬ್ಯುಲೆನ್ಸ್‌ಗಳಲ್ಲೇ ಇದ್ದವು.

ಮೂಡಿಗೆರೆ ತಾಲೂಕಿನ ಬಾಳೂರು ಹೊರಟ್ಟಿಗ್ರಾಮದ ಶೇಷಮ್ಮ (65) ಹಾಗೂ ಅವರ ಮಗ ಸತೀಶ್‌ (45) ಅವರು ನಡೆದುಕೊಂಡು ಹೋಗುವಾಗ ಧರೆ ಕುಸಿದು ಮೃತಪಟ್ಟಿದ್ದರು. ಈ ಇಬ್ಬರು ತಾಯಿ ಮತ್ತು ಮಗನ ಮೃತದೇಹಗಳನ್ನು ಮೂಡಿಗೆರೆಯ ಸರ್ಕಾರಿ ಆಸ್ಪತ್ರೆಗೆ ತಂದು ಶವ ಪರೀಕ್ಷೆ ನಡೆಸಿ ಶನಿವಾರ ಸಂಜೆಯೇ ಶೇಷಮ್ಮ ಅವರ ಅಳಿಯನಿಗೆ ಹಸ್ತಾಂತರ ಮಾಡಲಾಗಿತ್ತು.

ವರುಣನ ಅಬ್ಬರಕ್ಕೆ ಕರುನಾಡು ತತ್ತರ: ಮಳೆಗೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಕ್ಲಿಕ್ಕಿಸಿ

ಆದರೆ, ರಾತ್ರಿಯೇ ಮನೆಗೆ ತೆಗೆದುಕೊಂಡು ಹೋಗಲು ದಾರಿ ಇರಲಿಲ್ಲ, ಈ ಭಾಗದಲ್ಲಿ ಧರೆ ಕುಸಿದು ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಭಾನುವಾರ ಬೆಳಿಗ್ಗೆ 9 ಗಂಟೆಯ ವೇಳೆಗೆ ರಸ್ತೆಯ ಮೇಲಿನ ಮಣ್ಣು ತೆರವುಗೊಳಿಸಿದ ನಂತರ ಮೃತ ದೇಹಗಳನ್ನು ಊರಿಗೆ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ನಡೆಸಲಾಯಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

World Cancer Day 2026 ಭಾರತದಲ್ಲಿ ವರ್ಷದಲ್ಲಿ 14.1 ಲಕ್ಷ ಕ್ಯಾನ್ಸರ್‌ ಪ್ರಕರಣ ಪತ್ತೆ!
Vijayapura: ಮಗಳೇ ಮನೆಗೆ ಬಾರಮ್ಮಾ ಅಂದ್ರೆ ನಾನು ಮೊಹಮ್ಮದ್ ಸಲೀಂನ ಹೆಂಡ್ತಿ ಎಂದ ನಿಶಾ