ಬರ ಪರಿಹಾರ ಕೋರಿ ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿದ ಕೃಷ್ಣಬೈರೇಗೌಡ

Published : Feb 02, 2017, 02:26 PM ISTUpdated : Apr 11, 2018, 01:13 PM IST
ಬರ ಪರಿಹಾರ ಕೋರಿ ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿದ ಕೃಷ್ಣಬೈರೇಗೌಡ

ಸಾರಾಂಶ

ರಾಜ್ಯ ಸರ್ಕಾರ ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಅವರನ್ನು ಭೇಟಿಯಾಗಿ ಹಿಂಗಾರು ನಷ್ಟ  ಪರಿಹಾರಕ್ಕಾಗಿ ಕೇಂದ್ರ ಸರ್ಕಾರ ದಿಂದ ಎಸ್ ಡಿ ಆರ್ ಎಫ್ ನಿಯಮಗಳ ಅಡಿಯಲ್ಲಿ 3310 ಕೋಟಿ ಪರಿಹಾರ ಕೇಳಿದೆ.

ಬೆಂಗಳೂರು (ಫೆ.02): ರಾಜ್ಯ ಸರ್ಕಾರ ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಅವರನ್ನು ಭೇಟಿಯಾಗಿ ಹಿಂಗಾರು ನಷ್ಟ  ಪರಿಹಾರಕ್ಕಾಗಿ ಕೇಂದ್ರ ಸರ್ಕಾರ ದಿಂದ ಎಸ್ ಡಿ ಆರ್ ಎಫ್ ನಿಯಮಗಳ ಅಡಿಯಲ್ಲಿ 3310 ಕೋಟಿ ಪರಿಹಾರ ಕೇಳಿದೆ.

ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಮತ್ತು ಕೃಷಿ ಸಚಿವ ಕೃಷ್ಣ ಭೈರೇಗೌಡರು ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಅವರನ್ನು ಭೇಟಿಯಾಗಿದ್ದಾರೆ. ರಾಜ್ಯದಲ್ಲಿ ಹಿಂಗಾರು ನಷ್ಟದಿಂದ ಒಟ್ಟು 7097 ಕೋಟಿ ನಷ್ಟವಾಗಿದೆ. ಬೆಳೆ ನಾಶಕ್ಕೆ 919 ಕೋಟಿ, ಕುಡಿಯುವ ನೀರಿಗೆ  2164 ಕೋಟಿ ಪರಿಹಾರ ನೀಡುವಂತೆ  ರಾಜ್ಯ ಸರ್ಕಾರ ಕೇಳಿದೆ. ಹಿಂಗಾರಿನಲ್ಲಿ ರಾಜ್ಯದಲ್ಲಿ 160 ತಾಲೂಕು ಬರ ಪೀಡಿತವಾಗಿವೆ. ಇದುವರೆಗೂ ಕೇಂದ್ರ ಸರ್ಕಾರ ಮುಂಗಾರು ಪರಿಹಾರಕ್ಕೆ ಘೋಷಿಸಿದ್ದ ಹಣವನ್ನು ಇನ್ನು ಬಿಡುಗಡೆ ಮಾಡಿಲ್ಲ. ಬಿಜೆಪಿಯವರು ಹಣ ಬಿಡುಗಡೆ ಆದೇಶ ಪತ್ರ ಕೊಡಿಸಿದಲ್ಲಿ ನೂರು ನಮಸ್ಕಾರ ಹಾಕುತ್ತೇನೆ ಎಂದು ಕೃಷ್ಣಬೈರೇ ಗೌಡ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು