ಹ್ಯಾರೀಸ್ ಪುತ್ರನ ದಾದಾಗಿರಿ ಆಯ್ತು ಈಗ ಕೃಷ್ಣ ಬೈರೇ ಗೌಡರ ಬೆಂಬಲಿಗನಿಂದ ರೌಡಿಸಂ ಶುರು

Published : Feb 19, 2018, 12:46 PM ISTUpdated : Apr 11, 2018, 12:47 PM IST
ಹ್ಯಾರೀಸ್ ಪುತ್ರನ ದಾದಾಗಿರಿ ಆಯ್ತು ಈಗ ಕೃಷ್ಣ ಬೈರೇ ಗೌಡರ ಬೆಂಬಲಿಗನಿಂದ ರೌಡಿಸಂ ಶುರು

ಸಾರಾಂಶ

ಹ್ಯಾರಿಸ್ ಪುತ್ರನ ದಾದಾಗಿರಿ ಆಯ್ತು ಈಗ ಸಚಿವ ಕೃಷ್ಣಭೈರೇಗೌಡನ ಬೆಂಬಲಿಗನ ರೌಡಿಸಂ ಶುರುವಾಗಿದೆ. 

ಬೆಂಗಳೂರು (ಫೆ.17): ಹ್ಯಾರಿಸ್ ಪುತ್ರನ ದಾದಾಗಿರಿ ಆಯ್ತು ಈಗ ಸಚಿವ ಕೃಷ್ಣಭೈರೇಗೌಡನ ಬೆಂಬಲಿಗನ ರೌಡಿಸಂ ಶುರುವಾಗಿದೆ. 

ರಸ್ತೆ ಕಾಮಗಾರಿ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಕೃಷ್ಣಭೈರೇಗೌಡ  ಬೆಂಬಲಿಗ ಮುನಿರಾಜು ಹಲ್ಲೆ ನಡೆಸಿದ್ದಾರೆ.  ಬಿಜೆಪಿ ಬೆಂಬಲಿಗನಿಗೆ ಕಾಲಿನಿಂದ ಒದ್ದು, ಕಪಾಳಕ್ಕೆ ಹೊಡೆದು ಹಲ್ಲೆ ನಡೆಸಿದ್ದಾರೆ ಮುನಿರಾಜು. 

ಕೆಂಪಾಪುರ ದಾಸರಹಳ್ಳಿ ರಸ್ತೆಯನ್ನ ಅಭಿವೃದ್ಧಿ ಪಡಿಸುವ ವಿಚಾರದಲ್ಲಿ ಜಗಳ  ಶುರುವಾಗಿದೆ. ದೊಡ್ಡ ರಸ್ತೆಯನ್ನ ಕಿರಿದಾದ ರಸ್ತೆ ಮಾಡಲು ಮುಂದಾಗಿದ್ದನ್ನ ಬಿಜೆಪಿ ಕಾರ್ಯಕರ್ತ  ಕಾಂತರಾಜು ಪ್ರಶ್ನಿಸಿದ್ದರು.  ಈ ವೇಳೆ ಕಾಂತರಾಜು ಮೇಲೆ ಮುನಿರಾಜು  ಹಲ್ಲೆ ನಡೆಸಿದ್ದಾರೆ. ಈ  ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.  ದೃಶ್ಯ ಸಹಿತ ದೂರು ನೀಡಲು ಹೋದರೆ ಪೊಲೀಸರು ಕಂಪ್ಲೇಂಟ್ ಸ್ವೀಕರಿಸಲು ನಿರಾಕರಿಸಿದ್ದಾರೆ.  ಪೊಲೀಸರ ವರ್ತನೆ ವಿರುದ್ಧ ಬಿಜೆಪಿ  ಕಾರ್ಯಕರ್ತರು ಅಮೃತಹಳ್ಳಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಇಂಡಿಗೋ ಅವಾಂತರ: ನಾಲ್ವರು ಫ್ಲೈಟ್ ಆಪರೇಷನ್ ಇನ್ಸ್‌ಪೆಕ್ಟರ್‌ಗಳ ವಜಾ ಮಾಡಿದ ಡಿಜಿಸಿಎ
Railway Drug Mafia: ರೈಲುಗಳಲ್ಲಿ ಡ್ರಗ್ಸ್ ಮಾಫಿಯಾ ಜಾಲ.. ಹೆಚ್ಚಾಗುತ್ತಲೇ ಇದೆ ಗಾಂಜಾ ಸಾಗಣೆ