
ಬೆಂಗಳೂರು (ಫೆ.17): ಜಾಹೀರಾತು ಮೂಲಕ ಮೋದಿಗೆ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.
ಕಳೆದ ಮೋದಿ ಭೇಟಿ ವೇಳೆಯೂ ಜಾಹೀರಾತಿನಲ್ಲೇ ಸಿದ್ದರಾಮಯ್ಯ ಟಾಂಗ್ ನೀಡಿದ್ದರು. ನಂ. 1 ಕರ್ನಾಟಕಕ್ಕೆ ಸ್ವಾಗತ ಎಂದು ಜಾಹೀರಾತು ಮೂಲಕ ಟಾಂಗ್ ಕೊಟ್ಟಿದ್ದರು. ಈಗ, ಸಹಯೋಗದಲ್ಲೂ ಕರ್ನಾಟಕವೇ ಮುಂದು ಎಂಬ ಜಾಹೀರಾತಿನಿಂದ ಕೌಂಟರ್ ಅಟ್ಯಾಕ್ ಮಾಡಿದ್ದಾರೆ.
ಮೈಸೂರು-ಬೆಂಗಳೂರು ರೈಲ್ವೆ ಯೋಜನೆಗೆ ರಾಜ್ಯದ ಪಾಲೆಷ್ಟು ಬಗ್ಗೆ ಜಾಹೀರಾತಿನಲ್ಲಿ ರೈಲ್ವೆ ಯೋಜನಾ ವೆಚ್ಚದಲ್ಲಿ ಪಾಲು ವಹಿಸಿಕೊಂಡ ಮೊದಲ ರಾಜ್ಯ ಕರ್ನಾಟಕ. ಮೈಸೂರು - ಬೆಂಗಳೂರು ಜೋಡಿ ರೈಲು ಮಾರ್ಗದ ಒಟ್ಟು ವೆಚ್ಚ 990 ಕೋಟಿ ರೂ. 581 ಕೋಟಿ ರೂಪಾಯಿಯನ್ನು ಕರ್ನಾಟಕ ಸರ್ಕಾರ ವೆಚ್ಚ ಮಾಡಿದೆ. ರೈಲ್ವೆ ಇಲಾಖೆ ಕೊಟ್ಟಿರೋದು ಕೇವಲ 409 ಕೋಟಿ ರೂ. ಇದರಿಂದ ಈ ಮಾರ್ಗದಲ್ಲಿದ್ದ 24 ರೈಲುಗಳ ಸಂಖ್ಯೆ 76 ಕ್ಕೆ ಏರಲಿದೆ ಎಂದು ಜಾಹಿರಾತಿನಲ್ಲಿ ಹೇಳಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.