ಬೆಂಗಳೂರಿನಲ್ಲಿ ನಿಲ್ಲದ ಕಾಂಗ್ರೆಸ್ ಗೂಂಡಾಗಿರಿ : ವ್ಯಕ್ತಿಯೊಬ್ಬನ ಮೇಲೆ 8 ಮಂದಿಯಿಂದ ಹಲ್ಲೆ

Published : Mar 02, 2018, 04:49 PM ISTUpdated : Apr 11, 2018, 01:00 PM IST
ಬೆಂಗಳೂರಿನಲ್ಲಿ ನಿಲ್ಲದ ಕಾಂಗ್ರೆಸ್ ಗೂಂಡಾಗಿರಿ : ವ್ಯಕ್ತಿಯೊಬ್ಬನ ಮೇಲೆ 8 ಮಂದಿಯಿಂದ ಹಲ್ಲೆ

ಸಾರಾಂಶ

ವಿಜಿನಾಪುರದ ಮುರುಗನ್ ದೇವಾಸ್ಥಾನದ ಬಳಿ ಕಾಂಗ್ರೆಸ್ ಮುಖಂಡ ಮುನಿರಾಜು ಎಂಬುವರು ಮಗ ಅಭಿ ಮತ್ತು ಆತನ ಗ್ಯಾಂಗ್'ನಿಂದ ಕೃತ್ಯ ನಡೆದಿದೆ. 

ಬೆಂಗಳೂರು(ಮಾ.02): ಕಾಂಗ್ರೆಸ್ ಕಾರ್ಯಕರ್ತರ ಗೂಂಡಾಗಿರಿ ಮತ್ತೆ ಮುಂದುವರಿದಿದೆ. ಕೆಆರ್ ಪುರದಲ್ಲಿ ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬನ ಮೇಲೆ 8 ಮಂದಿ ಹಲ್ಲೆ ನಡೆಸಿದ್ದಾರೆ.

ಸಯ್ಯದ್ ತಬರೇಜ್ ಹಲ್ಲೆಗೊಳಗಾದ ಯುವಕ. ಮಾ. 27 ರಂದು ಘಟನೆ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.  ವಿಜಿನಾಪುರದ ಮುರುಗನ್ ದೇವಾಸ್ಥಾನದ ಬಳಿ ಕಾಂಗ್ರೆಸ್ ಮುಖಂಡ ಮುನಿರಾಜು ಎಂಬುವರು ಮಗ ಅಭಿ ಮತ್ತು ಆತನ ಗ್ಯಾಂಗ್'ನಿಂದ ಕೃತ್ಯ ನಡೆದಿದೆ. ಹಲ್ಲೆ ನಡೆಸಿದ ಪರಿಣಾಮ ತಲೆಗೆ ತೀವ್ರವಾದ ಪೆಟ್ಟು ಬಿದ್ದು 5 ಹೊಲಿಗೆ ಹಾಕಲಾಗಿದೆ. ಕೈ ಕಾಲುಗಳಿಗೆ ಗಂಭಿರ ಸ್ವರೂಪದ ಗಾಯವಾಗಿದೆ.

ರಾಮಮೂರ್ತಿನಗರ ಠಾಣೆಯಲ್ಲಿ ಪ್ರಕರಣ ದಾಖಲಾದರೂ ಪೊಲೀಸರು ಅಭಿ, ಮಹೇಂದ್ರ, ಪುಟ್ಟ, ಅಖಿಲ್ ಎಂಬುವವರನ್ನು ವಿಚಾರಣೆ ನಡೆಸಿ ಕ್ರಮ ಕೈಗೊಳ್ಳದೆ ವಾಪಸ್ ಕಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಳಿಗಾಲಕ್ಕಾಗಿಯೇ ವಿಶೇಷ ಬ್ರೇಕ್‌ಫಾಸ್ಟ್‌ ರೆಸಿಪಿ ತಿಳಿಸಿದ ಬಾಬಾ ರಾಮ್‌ದೇವ್‌, ಇದರಿಂದ ಇದೆ ಸಾಕಷ್ಟು ಪ್ರಯೋಜನ!
ಕಾದು ಕಾದು ಸುಸ್ತಾದ ಶೆಹಬಾಜ್‌ ಷರೀಫ್‌, ಟರ್ಕಿ ಅಧ್ಯಕ್ಷರ ಜೊತೆ ಪುಟಿನ್‌ ಮೀಟಿಂಗ್‌ ವೇಳೆ ಒಳನುಗ್ಗಿದ ಪಾಕ್‌ ಪ್ರಧಾನಿ!