ವಾಸ್ತು ದೋಷ: ದಿಕ್ಕು ಬದಲಿಸಿದ ದಿನೇಶ್ ಗುಂಡೂರಾವ್

Published : Jul 17, 2018, 06:18 PM IST
ವಾಸ್ತು ದೋಷ:  ದಿಕ್ಕು ಬದಲಿಸಿದ ದಿನೇಶ್ ಗುಂಡೂರಾವ್

ಸಾರಾಂಶ

ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಪಡೆದರೂ ಪರಮೇಶ್ವರ್ ಗೆ ಸಿಎಂ ಭಾಗ್ಯ ದೊರೆಯಲಿಲ್ಲ ದಕ್ಷಿಣಕ್ಕೆ ಚೇರ್ ಹಾಕಿ ಉತ್ತರದ ಕಡೆ ಮುಖ ಮಾಡಿ ಕುಳಿತುಕೊಳ್ಳುತ್ತಿರುವ ದಿನೇಶ್ ಗುಂಡೂರಾವ್  

ಬೆಂಗಳೂರು[ಜು.17]: ಕೆಪಿಸಿಸಿ ನೂತನ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೂ ವಾಸ್ತು ದೋಷ ಶುರುವಾಗಿದೆ.

ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು 8 ವರ್ಷ ಕೆಪಿಸಿಸಿ ಅಧ್ಯಕ್ಷರಾದರೂ ಸಿಎಂ ಆಗಲಿಲ್ಲ. ಸಿಎಂ ಸ್ಥಾನ ಸಿಗದಿರಲು ಪರಮೇಶ್ವರ್ ಗೆ ವಾಸ್ತು ದೋಷವೇ ಕಾರಣವಂತೆ. ಅಲ್ಲದೆ ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಪಡೆದರೂ ಪರಮೇಶ್ವರ್ ಗೆ ಸಿಎಂ ಭಾಗ್ಯ ದೊರೆಯಲಿಲ್ಲ. ಈ ಕಾರಣದಿಂದ ದಿನೇಶ್ ಗುಂಡೂರಾವ್ ಅವರಿಗೂ ವಾಸ್ತು ಸಮಸ್ಯೆ ಶುರುವಾಗಿದೆ.

ಪರಮೇಶ್ವರ್ ಅವರು ಕೆಪಿಸಿಸಿ ಅದ್ಯಕ್ಷರಾಗಿದ್ದಾಗ ಪಶ್ಚಿಮಕ್ಕೆ ಮುಖ ಮಾಡಿ ಕುಳಿತುಕೊಳ್ಳುತ್ತಿದ್ದರು. ಈ ಎಲ್ಲ ಕಾರಣ ಗಮನಿಸಿದ ದಿನೇಶ್ ಗುಂಡೂರಾವ್ ಅವರು ಪಶ್ಚಿಮದ ಬದಲು ದಕ್ಷಿಣಕ್ಕೆ ಚೇರ್ ಹಾಕಿ ಉತ್ತರದ ಕಡೆ ಮುಖ ಮಾಡಿ ಕುಳಿತುಕೊಳ್ಳುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾದವರು ಮುಂದೆ ಪಕ್ಷ ಅಧಿಕಾರಕ್ಕೆ ಬಂದರೆ ಸಿಎಂ ಆಗ್ತಾರೆ ಎಂಬ ವಾಡಿಕೆಯಿದೆ. ಇವೆಲ್ಲ ಕಾರಣದಿಂದ ಸ್ಥಳ ಬದಲಾಯಿಸಲಾಗಿದೆ ಎಂಬ ಗುಸುಗುಸು ಕಚೇರಿಯಲ್ಲಿ ಶುರುವಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಿಜೆಪಿ ಸಂಘಟನಾ ಶಕ್ತಿ ಮೆಚ್ಚಿ ದಿಗ್ವಿಜಯ್ ಸಿಂಗ್ ಪೋಸ್ಟ್; ವಿವಾದ ತಾರಕಕ್ಕೇರುತ್ತಿದ್ದಂತೆ ಹಿರಿಯ ನಾಯಕನ ಸ್ಪಷ್ಟನೆ!
ತುಮಕೂರು-ಬೆಂ.ದಕ್ಷಿಣ ಜಿಲ್ಲೆಗೆ ರೈಲ್ವೆ ಸೌಕರ್ಯ ಕಲ್ಪಿಸಲು ಕೇಂದ್ರ ಸರ್ಕಾರ ಬದ್ಧ, ವಿ.ಸೋಮಣ್ಣ ಸ್ಪಷ್ಟನೆ