ರಾಜ್ಯ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆ: 4 ವರ್ಷ ಪೂರೈಸಿದ ಸಚಿವರ ಬದಲಾವಣೆ ಕುರಿತು ಚರ್ಚೆ

Published : Feb 25, 2017, 03:57 AM ISTUpdated : Apr 11, 2018, 12:59 PM IST
ರಾಜ್ಯ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆ: 4 ವರ್ಷ ಪೂರೈಸಿದ ಸಚಿವರ ಬದಲಾವಣೆ ಕುರಿತು ಚರ್ಚೆ

ಸಾರಾಂಶ

ಡರ್ಟಿ ಡೈರಿ ಪುರಾಣದ ನಡುವೆ ನಾಳೆ ರಾಜ್ಯ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆ ನಡೆಯಲಿದೆ. ಸಭೆಯಲ್ಲಿ ಸಂಪುಟ ಪುನಾರಚನೆಗೆ ಮನವಿ ಮಾಡಲು ಕೆಪಿಸಿಸಿ ತೀರ್ಮಾನಿಸಿದೆ.

ಬೆಂಗಳೂರು(ಫೆ.25): ಡರ್ಟಿ ಡೈರಿ ಪುರಾಣದ ನಡುವೆ ನಾಳೆ ರಾಜ್ಯ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆ ನಡೆಯಲಿದೆ. ಸಭೆಯಲ್ಲಿ ಸಂಪುಟ ಪುನಾರಚನೆಗೆ ಮನವಿ ಮಾಡಲು ಕೆಪಿಸಿಸಿ ತೀರ್ಮಾನಿಸಿದೆ.

ಸಮನ್ವಯ ಸಮಿತಿ ಸಭೆಯಲ್ಲಿ ‌ಚರ್ಚಿಸಬಹುದಾದ ವಿಷಯಗಳ ಪಟ್ಟಿಯಲ್ಲಿ 4 ವರ್ಷ ಪೂರೈಸಿದ‌ ಸಚಿವರ ಬದಲಾವಣೆಯೇ ಮೊದಲ ವಿಷಯ. ಸರ್ಕಾರದಲ್ಲಿ 4 ವರ್ಷ ಪೂರೈಸಿದ ಸಚಿವರ ಬದಲಾಯಿಸಿ ಹೊಸ‌ ಮುಖಗಳಿಗೆ ಅವಕಾಶ ನೀಡುವ ವಿಚಾರವೇ ಚರ್ಚೆಯ ಮೊದಲ ವಿಚಾರ.

ಸಮನ್ವಯ ಸಮಿತಿ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಹಾಗೂ ಸಮಿತಿಯ ಎಲ್ಲ ಸದಸ್ಯರು ಒಪ್ಪಿದರೆ‌ ಮಾತ್ರ 4 ವರ್ಷ ಪೂರೈಸಿದ ಸಚಿವರಿಗೆ ಗೇಟ್ ಪಾಸ್ ನೀಡಲು ತೀರ್ಮಾನಿಸಲಾಗುತ್ತದೆ. 4 ವರ್ಷ ಪೂರೈಸಿದ ಸಚಿವರನ್ನು ಬದಲಾಯಿಸಿ ಪಕ್ಷದ ಜವಾಬ್ದಾರಿ ನೀಡುವ ವಿಚಾರವೂ ಚರ್ಚೆಗೆ ಬರಲಿದೆ.

ಇನ್ನು, 15 ವಿಧಾನಸಭಾ ಕ್ಷೇತ್ರಗಳ‌ ಸಂಘಟನಾ ಜವಾಬ್ದಾರಿ ನೀಡುವ ಬಗ್ಗೆ ಚರ್ಚಿಸಲು ಕೆಪಿಸಿಸಿ ವತಿಯಿಂದ ಚರ್ಚೆಗೆ  ಶಿಫಾರಸು ಮಾಡಲಾಗಿದೆ. ಈ ವಿಷಯಗಳ ಕುರಿತ ಕೆಪಿಸಿಸಿ ಪತ್ರ ಸುವರ್ಣ ನ್ಯೂಸ್ ಗೆ ಲಭ್ಯವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಸಂಗಮ: ಶ್ರೀ ಶ್ರೀ ರವಿಶಂಕರ್ ನೇತೃತ್ವದಲ್ಲಿ 1.21 ಕೋಟಿ ಜನರಿಂದ ಏಕಕಾಲಕ್ಕೆ ಧ್ಯಾನ!
ಶೇಖ್ ಹಸೀನಾ ವಿರೋಧಿ ಬಣದ ಮತ್ತೊಬ್ಬ ನಾಯಕನ ಮೇಲೆ ಬಾಂಗ್ಲಾದಲ್ಲಿ ದಾಳಿ, ಮನೆಯ ಒಳಗಿದ್ದಾಗಲೇ ತಲೆಗೆ ಬಿತ್ತು ಗುಂಡು!