
2004ರ ನವೆಂಬರ್ನಲ್ಲಿ ದೀಪಾವಳಿಗಿಂತ ಮೊದಲು ಕಂಚಿ ಕಾಮಕೋಟಿ ಶ್ರೀ ಜಯೇಂದ್ರ ಸರಸ್ವತಿ ಅವರನ್ನು ಬಂಧಿಸಿ ಒಳ ಹಾಕಿದ್ದಾಗ ಸಂಜೆ ನಡೆದ ಸಂಪುಟ ಸಭೆಯಲ್ಲಿ ಒಳಗೆ ಹೋದವರೇ ಪ್ರಣಬ್ ಕೂಗಾಡಿದರಂತೆ. ದೇಶದಲ್ಲಿ ಸೆಕ್ಯುಲರಿಸಂ ಜೀವಂತವಾಗಿ ಇರುವುದಕ್ಕೆ ಕೇವಲ ಹಿಂದೂ ಸನ್ಯಾಸಿಗಳೇ ಜೈಲಿಗೆ ಹೋಗಬೇಕೆ? ಯಾವುದಾದರೂ ಮುಸ್ಲಿಮರ ಪವಿತ್ರ ಹಬ್ಬದ ಮೊದಲ ದಿನ ಮೌಲ್ವಿ ಗಳನ್ನು ಬಂಧಿಸಿದರೆ ಏನಾಗುತ್ತದೆ? ಇದು ಸರ್ವಥಾ ಸರಿಯಲ್ಲ ಎಂದು ಕೂಗಾಡಿದ ಪ್ರಣಬ್, ಅಲ್ಲಿಂದಲೇ ತಮಿಳುನಾಡಿನ ಪೊಲೀಸ್ ಮುಖ್ಯಸ್ಥರಿಗೆ ಫೋನ್ ಮಾಡಿದರಂತೆ.
ಇನ್ನೊಂದು ಬಾರಿ ಯುಪಿಎ-2 ಸಂದರ್ಭದಲ್ಲಿ ಲೋಕಸಭೆಯಲ್ಲಿ ಗದ್ದಲ ಮಾಡುತ್ತಿದ್ದ ಬಿಜೆಪಿ ಸಂಸದರ ಮೇಲೆ ಪ್ರಣಬ್ ಜೋರಾಗಿ ಕೂಗಿದಾಗ ಸುಷ್ಮಾ ಸ್ವರಾಜ್ ಕ್ಷಮೆ ಕೇಳಬೇಕಾಯಿತಂತೆ. ಆಗ ಪಕ್ಕದಲ್ಲಿ ಕೂತಿದ್ದ ಸೋನಿಯಾ ‘ಈ ನಿಮ್ಮ ಸಿಟ್ಟಿನಿಂದಲೇ ನಿಮ್ಮನ್ನು ರಾಷ್ಟ್ರಪತಿ ಮಾಡಲು ಹಿಂಜರಿಕೆ’ ಎಂದು ಹೇಳಿದ್ದರಂತೆ.
(ಪ್ರಶಾಂತ್ ನಾತು ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ: ಕನ್ನಡಪ್ರಭ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.