ಚಲನಚಿತ್ರ ನಟ ಅಚ್ಯುತ್ ಕುಮಾರ್ ನಿರ್ದೇಶನದ, "ಥಿಯೇಟರ್ ತತ್ಕಾಲ್" ಅರ್ಪಿಸುವ ನಾಟಕ "ಕೊಳ" ರಂಗ ಶಂಕರದಲ್ಲಿ ಆಗಸ್ಟ್ 20, 2017 ರಂದು ಮದ್ಯಾಹ್ನ 3-30 ಹಾಗೂ ಸಂಜೆ 7-30 ಕ್ಕೆ ಪ್ರದರ್ಶನಗೊಳ್ಳಲಿದೆ.
ಬೆಂಗಳೂರು (ಆ.18): ಚಲನಚಿತ್ರ ನಟ ಅಚ್ಯುತ್ ಕುಮಾರ್ ನಿರ್ದೇಶನದ, "ಥಿಯೇಟರ್ ತತ್ಕಾಲ್" ಅರ್ಪಿಸುವ ನಾಟಕ "ಕೊಳ" ರಂಗ ಶಂಕರದಲ್ಲಿ ಆಗಸ್ಟ್ 20, 2017 ರಂದು ಮದ್ಯಾಹ್ನ 3-30 ಹಾಗೂ ಸಂಜೆ 7-30 ಕ್ಕೆ ಪ್ರದರ್ಶನಗೊಳ್ಳಲಿದೆ.
"ಕೊಳ" ನಾಟಕವು 'ಮಹೇಶ್ ಎಲ್ಕುಂಚ್ವಾರ್' ಅವರ 'ವಾಡೆ ತ್ರಿವಳಿಯಲ್ಲೊಂದಾದ' "ಮಗ್ನಾ ತಾಳ್ಯಾಕಾಟಿ" ಎಂಬ ಮರಾಠಿ ನಾಟಕದ ಕನ್ನಡಾನುವಾದ. ಇದನ್ನು ಕನ್ನಡಕ್ಕೆ ಅನುವಾದಿಸಿದವರು ನಂದಿನಿ. ಕೆ. ಆರ್. ಮತ್ತು ಪ್ರಶಾಂತ್ ಹಿರೇಮಠ್. ಮುರಿದು ಹೋಗಿರುವ ಸಂಬಂಧಗಳು, ಚೆದುರಿ ಹೋಗುತ್ತಿರುವ ವಾಡೆಯನ್ನು ಬಿಂಬಿಸುವ ಈ ನಾಟಕ ಪಾತ್ರಗಳ ಅಸ್ತಿತ್ವ ಮತ್ತು ನೆಲೆಗಟ್ಟುಗಳನ್ನು ಪ್ರಶ್ನಿಸುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.