ಎಲ್‌. ಎನ್‌. ಶಾಸ್ತ್ರಿಯವರಿಗೆ ಆರ್ಥಿಕ ನೆರವು ನೀಡಲು ಮುಂದಾಗಿದ್ದಾರೆ ಜಗ್ಗೇಶ್

Published : Aug 18, 2017, 08:20 PM ISTUpdated : Apr 11, 2018, 12:51 PM IST
ಎಲ್‌. ಎನ್‌. ಶಾಸ್ತ್ರಿಯವರಿಗೆ ಆರ್ಥಿಕ ನೆರವು ನೀಡಲು ಮುಂದಾಗಿದ್ದಾರೆ ಜಗ್ಗೇಶ್

ಸಾರಾಂಶ

ಎಲ್‌. ಎನ್‌. ಶಾಸ್ತ್ರಿ ಕನ್ನಡದ ಪ್ರಸಿದ್ಧ ಗಾಯಕ. ಸುಮಾರು 3000 ಕ್ಕೂ ಗೀತೆಗಳನ್ನು ಇವರು ಹಾಡಿದ್ದಾರೆ. 1996 ರಲ್ಲಿ ತೆರೆಕಂಡಿದ್ದ 'ಅಜಗಜಾಂತರ' ಸಿನಿಮಾ ಮೂಲಕ ಇವರು ಚಿತ್ರರಂಗಕ್ಕೆ ಕಾಲಿಟ್ಟರು. ಜಗ್ಗೇಶ್‌ ಅವರ ಅನೇಕ ಚಿತ್ರಗಳಲ್ಲಿ ಶಾಸ್ತ್ರಿ ಕೆಲಸ ಮಾಡಿದ್ದಾರೆ. ಸದ್ಯ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಆರ್ಥಿಕ ನೆರವು ಅವಶ್ಯಕತೆ ಇದೆ ಎಂದು ಖಾಸಗಿ ವಾಹಿನಿಯೊಂದು ಸುದ್ದಿ ಪ್ರಸಾರ ಮಾಡಿತ್ತು. ಇದನ್ನು ಗಮನಿಸಿದ ನಟ ಜಗ್ಗೇಶ್‌, ಆರ್ಥಿಕವಾಗಿ ಸಹಾಯ ಮಾಡಲು ಮುಂದಾಗಿದ್ದಾರೆ.

ಬೆಂಗಳೂರು (ಆ.18): ಎಲ್‌. ಎನ್‌. ಶಾಸ್ತ್ರಿ ಕನ್ನಡದ ಪ್ರಸಿದ್ಧ ಗಾಯಕ. ಸುಮಾರು 3000 ಕ್ಕೂ ಗೀತೆಗಳನ್ನು ಇವರು ಹಾಡಿದ್ದಾರೆ. 1996 ರಲ್ಲಿ ತೆರೆಕಂಡಿದ್ದ 'ಅಜಗಜಾಂತರ' ಸಿನಿಮಾ ಮೂಲಕ ಇವರು ಚಿತ್ರರಂಗಕ್ಕೆ ಕಾಲಿಟ್ಟರು. ಜಗ್ಗೇಶ್‌ ಅವರ ಅನೇಕ ಚಿತ್ರಗಳಲ್ಲಿ ಶಾಸ್ತ್ರಿ ಕೆಲಸ ಮಾಡಿದ್ದಾರೆ. ಸದ್ಯ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಆರ್ಥಿಕ ನೆರವು ಅವಶ್ಯಕತೆ ಇದೆ ಎಂದು ಖಾಸಗಿ ವಾಹಿನಿಯೊಂದು ಸುದ್ದಿ ಪ್ರಸಾರ ಮಾಡಿತ್ತು. ಇದನ್ನು ಗಮನಿಸಿದ ನಟ ಜಗ್ಗೇಶ್‌, ಆರ್ಥಿಕವಾಗಿ ಸಹಾಯ ಮಾಡಲು ಮುಂದಾಗಿದ್ದಾರೆ.

ಟ್ವಿಟರ್‌ನಲ್ಲಿ ಈ ಕುರಿತು ಹೇಳಿರುವ ಜಗ್ಗೇಶ್‌, ಶಾಸ್ತ್ರಿಯವರು ಭಾವಜೀವಿ, 'ಭಂಡ ನನ್ನ ಗಂಡ' ಚಿತ್ರಕ್ಕೆ ರಾತ್ರಿ ಎಲ್ಲಾ ನನ್ನ ಜೊತೆ ಕುಳಿತು ' ಅಂತಿಂಥ ಗಂಡು ನಾನಲ್ಲಾ' ಹಾಡಲು ಸಹಾಯ ಮಾಡಿದ್ದರು. ನನ್ನ ಅನೇಕ ಚಿತ್ರಕ್ಕೆ ಇವರೇ ಹಾಡುತ್ತಿದ್ದರು. ನನಗೆ ಹಾಡಿದ ಮಹನೀಯ, ನಾನು ಸಹಾಯ ಮಾಡುವೆ. ಸಂಬಂಧಪಟ್ಟವರಿಗೆ ಈಗಲೇ ಮಾತಾಡುವೆ. ಇವರ ಅನಾರೋಗ್ಯದ ಬಗ್ಗೆ ಕೇಳಿ ತುಂಬ ದುಃಖವಾಯಿತು, ದೇವರಂತ ಮನುಷ್ಯನಿಗೆ ಈ ಪರೀಕ್ಷೆ ಏಕೆ? ರಾಯರ ದಯೇ ಇರಲಿ ಇವರ ಮೇಲೆ ಎಂದು ಜಗ್ಗೇಶ್‌ ಟ್ವೀಟ್‌ ಮಾಡಿದ್ದಾರೆ.  

 

 

 

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕುಮಾರ ಪರ್ವತ ಯಾತ್ರೆ, ಬೆಟ್ಟದ ತುದಿಯಲ್ಲಿರುವ ದೇವರ ಪಾದಕ್ಕೆ ಸಂಪ್ರದಾಯದಂತೆ ವಿಶೇಷ ಪೂಜೆ ಸಂಪನ್ನ
ಬೆಂಗಳೂರಿನಲ್ಲಿ ಊಬರ್‌ ಕ್ರಾಂತಿಯ ಹೆಜ್ಜೆ, B2B ಲಾಜಿಸ್ಟಿಕ್ಸ್, ಮೆಟ್ರೋ ಟಿಕೆಟ್‌ ಕೂಡ ಲಭ್ಯ!