
ನವದೆಹಲಿ (ಜು. 01): ಸಂಸತ್ ಭವನಕ್ಕೆ ಸೈಕಲ್ನಲ್ಲಿ ತೆರಳುವ ಸಂಸದರ ಸಂಖ್ಯೆ ದಿಢೀರ್ ಹೆಚ್ಚಳವಾಗಿದೆ. ಇಷ್ಟುದಿನ ಇಬ್ಬರು-ಮೂವರು ಸಂಸದರು ಮಾತ್ರ ಸೈಕಲ್ನಲ್ಲಿ ಸಂಸತ್ತಿಗೆ ಬರುತ್ತಿದ್ದರು.
ಆದರೆ ಈಗ 25-30 ಸಂಸದರು ಸೈಕಲ್ನಲ್ಲಿ ಸಂಸತ್ತಿಗೆ ಬರತೊಡಗಿದ್ದು, ಅದಕ್ಕೆ ಪಾಸ್ ಕೂಡ ಕೇಳಿದ್ದಾರೆ. ಇದಕ್ಕೆ ಕಾರಣ ಈ ಬಾರಿ ಸಚಿವ ಸಂಪುಟ ರಚನೆಯಲ್ಲಿ ಪ್ರಧಾನಿ ಮೋದಿ ಅವರು ಸೈಕಲ್ನಲ್ಲಿ ಬರುವ ಎಲ್ಲಾ ಮೂವರು ಸಂಸದರಿಗೆ ಮಂತ್ರಿ ಸ್ಥಾನ ನೀಡಿರುವುದು. ಸೈಕಲ್ನಲ್ಲಿ ಬಂದರೆ ಮೋದಿ ಮೆಚ್ಚಿಕೊಳ್ಳುತ್ತಾರೆ ಎಂದು ಭಾವಿಸಿರುವ ಸಂಸದರು, ಮುಂದಾದರೂ ತಮಗೆ ಸಚಿವ ಸ್ಥಾನ ನೀಡಲಿ ಎಂಬ ಉದ್ದೇಶದಿಂದ ಕಾರು ಬಿಟ್ಟು ಸೈಕಲ್ ಹತ್ತಿದ್ದಾರೆಂದು ಸುಳ್ಸುದ್ದಿ ಮೂಲಗಳು ಹೇಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.