ಲೋಕಾಯುಕ್ತರನ್ನು ಕೊಲೆ ಮಾಡಲೆತ್ನಿಸಿದವನ ಹಿನ್ನಲೆ ಏನು?

Published : Mar 07, 2018, 04:10 PM ISTUpdated : Apr 11, 2018, 01:08 PM IST
ಲೋಕಾಯುಕ್ತರನ್ನು ಕೊಲೆ ಮಾಡಲೆತ್ನಿಸಿದವನ ಹಿನ್ನಲೆ ಏನು?

ಸಾರಾಂಶ

ಕೊಲೆ ಯತ್ನ ನಡೆಸಿದವನು, ರಾಜಸ್ಥಾನ ಮೂಲದ ತೇಜ್ ರಾಜ್ ಶರ್ಮಾ ಎಂದು ಗುರುತಿಸಲಾಗಿದ್ದು, ಹಾಲಿ ತುಮಕೂರಿನ ತಿಪಟೂರಿನ ನಿವಾಸಿ ಆಗಿದ್ದಾನೆ.

ಬೆಂಗಳೂರು(ಮಾ.07): ನ್ಯಾ. ವಿಶ್ವನಾಥ್ ಶೆಟ್ಟಿ ಮೇಲೆ ಲೋಕಾಯುಕ್ತ ಕಚೇರಿಯಲ್ಲೇ ಕೊಲೆಯತ್ನ ನಡೆದಿದ್ದು, ಇದೀಗ ಲೋಕಾಯುಕ್ತರು ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊಲೆ ಯತ್ನ ನಡೆಸಿದವನು, ರಾಜಸ್ಥಾನ ಮೂಲದ ತೇಜ್ ರಾಜ್ ಶರ್ಮಾ ಎಂದು ಗುರುತಿಸಲಾಗಿದ್ದು, ಹಾಲಿ ತುಮಕೂರಿನ ತಿಪಟೂರಿನ ನಿವಾಸಿ ಆಗಿದ್ದಾನೆ.

ಯಾರು ಈ ತೇಜ್ ರಾಜ್ ಶರ್ಮಾ:

ತುಮಕೂರಿನಲ್ಲಿ ಈತ ಫರ್ನಿಚರ್ ವ್ಯಾಪಾರಿಯಾಗಿದ್ದು, ಸರ್ಕಾರಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ದೂರು ನೀಡುವ ಪ್ರೌವೃತ್ತಿ ಹೊಂದಿದ್ದ. ತೇಜಸ್ ಟೆಂಡರ್ ವಿಚಾರವಾಗಿ 18 ಸರ್ಕಾರಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಆದರೆ ತೇಜಸ್ ಪರವಾಗಿ ಲೋಕಾಯುಕ್ತದಲ್ಲಿ ತೀರ್ಪು ಬಂದಿರಲಿಲ್ಲ. ಇದರಿಂದ ಹತಾಶಗೊಂಡು ಲೋಕಾಯುಕ್ತ ವಿಶ್ವನಾಥ್ ಶೆಟ್ಟಿಯನ್ನು ಹತ್ಯೆ ಮಾಡಲು ಯತ್ನಿಸಿದ್ದಾನೆ.

ತೇಜಸ್ ಎಆರ್ಇ ಲಕ್ಷ್ಮಿ ಅವರನ್ನು ಬೇಟಿಯಾಗಲು ಲೋಕಾಯುಕ್ತ ಕಚೇರಿಗೆ ಬಂದಿದ್ದರು. ಅವರ ಉತ್ತರದಿಂದ ಸಮಾಧಾನಗೊಳ್ಳದೇ, ನನಗೆ ಅನ್ಯಾಯವಾಗಿದೆ ಎಂದು ಲೋಕಾಯುಕ್ತರನ್ನು ಚಾಕುವಿನಿಂದ ಮೂರು ಬಾರಿ ಇರಿದಿದ್ದಾನೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!