
ಚಂಡೀಗಢ(ಅ.13): ಭಾರತದ ಖ್ಯಾತ ಕುಸ್ತಿಪಟು ದಿಲೀಪ್ ಸಿಂಗ್ ರಾಣಾ ಅಲಿಯಾಸ್ ಖಲಿ, ಗುರಗಾಂವ್ನಲ್ಲಿ ತಮ್ಮ ಕುಸ್ತಿ ತರಬೇತಿ ಕೇಂದ್ರದಲ್ಲಿ ಕುಸ್ತಿ ಚಾಂಪಿಯನ್ ಆಯೋಜಿಸಿದ್ದರು. ಇದಕ್ಕೆ ಕೆಲ ವಿದೇಶಿ ಕುಸ್ತಿಪಟುಗಳನ್ನೂ ಆಹ್ವಾನಿಸಲಾಗಿತ್ತು.
ಆದರೆ ಕುಸ್ತಿ ಪಂದ್ಯ ನಡೆಯಬೇಕಿದ್ದ ದಿನವೇ ಅಲ್ಲಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನಿಗದಿಯಾಗಿದ್ದರಿಂದ ಪಂದ್ಯಗಳು ರದ್ದಾಗಿದ್ದವು. ಇದರಿಂದ ಕೆಲ ವಿದೇಶಿ ಕುಸ್ತಿಪಟುಗಳು ಕುಸ್ತಿ ಕೇಂದ್ರಕ್ಕೆ ನುಗ್ಗಿ ಪೀಠೊಪಕರಣಗಳನ್ನು ಹಾನಿ ಮಾಡಿದರು. ಇದರಿಂದ ಕೋಪಗೊಂಡ ಖಲಿ ಸೀದಾ ವಿದೇಶಿ ಕುಸ್ತಿಪಟುಗಳು ಇದ್ದ ಹೋಟೆಲ್ಗೆ ತೆರಳಿದ ಅಲ್ಲಿದ್ದ ಇಬ್ಬರು ಕುಸ್ತಿಪಟುಗಳಿಗೆ ಅವರ ಪ್ರೇಯಸಿಯ ಎದುರಿಗೆ ಚೆನ್ನಾಗಿ ತದುಕಿ ಬುದ್ಧಿ ಕಲಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.