ಸುವರ್ಣ ಸೌಧ ಕ್ಯಾಂಟಿನ್’ಗಳಿಗೆ ಖಾದರ್ ದಾಳಿ

By Suvarna Web DeskFirst Published Nov 21, 2017, 6:18 PM IST
Highlights

ಸುವರ್ಣ ಸೌಧದಲ್ಲಿನ ಕ್ಯಾಂಟಿನ್’ಗಳಲ್ಲಿ ವಸ್ತುಗಳನ್ನು MRPಗಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಯು.ಟಿ.ಖಾದರ್ ದಾಳಿ ನಡೆಸಿರುವ ಘಟನೆ ನಡೆದಿದೆ.

ಬೆಳಗಾವಿ: ಸುವರ್ಣ ಸೌಧದಲ್ಲಿನ ಕ್ಯಾಂಟಿನ್’ಗಳಲ್ಲಿ ವಸ್ತುಗಳನ್ನು MRPಗಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಯು.ಟಿ.ಖಾದರ್ ದಾಳಿ ನಡೆಸಿರುವ ಘಟನೆ ನಡೆದಿದೆ.

ಆಹಾರ ಇಲಾಖೆ ಸ್ಥಳೀಯ ಅಸಿಸ್ಟೆಂಟ್ ಕಂಟ್ರೋಲರ್ ಜತೆ ಕಾರ್ಯಾಚರಣೆಗಿಳಿದ ಖಾದರ್, ಹೆಚ್ಚಿನ ಬೆಲೆಗೆ ವಸ್ತುಗಳನ್ನು ಮಾರುತ್ತಿದ್ದ ಕ್ಯಾಂಟಿನ್ ಮಾಲೀಕರಿಗೆ ಶಾಕ್ ನೀಡಿದ್ದಾರೆ.

ಗ್ರಾಹಕರ ಸೋಗಿನಲ್ಲಿ ಹೋಗಿ ಆಹಾರ ಪದಾರ್ಥ ಖರೀದಿಸಿದ ಯು.ಟಿ.ಖಾದರ್, ವಿಧಾನಸಭೆ ಮತ್ತು ವಿಧಾನಪರಿಷತ್ ಮೊಗಸಾಲೆಯ ಕ್ಯಾಂಟೀನ್ ಮೇಲೆ ದಾಳಿ ನಡೆಸಿದ್ದಾರೆ.

click me!