
ತಿರುವನಂತಪುರ[ಆ. 09] ಕೇರಳದಲ್ಲೂ ರಣ ಭೀಕರ ಮಳೆಯಾಗುತ್ತಿದೆ. ವಯನಾಡಿನ ಮೆಪ್ಪಾಡಿ ಪುತ್ತುಮಲ ಎಂಬಲ್ಲಿ ಗುರುವಾರ ಭೂ ಕುಸಿತ ಸಂಭವಿಸಿ ಮಣ್ಣಿನಡಿ ಸಿಕ್ಕ ಜನರ ಮಾಹಿತಿ ಇನ್ನು ಸ್ಪಷ್ಟವಾಗಿ ಸಿಕ್ಕಿಲ್ಲ.
ಕೇರಳದ 9 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಎರ್ನಾಕುಲಂ, ಉಡುಕ್ಕಿ, ತ್ರಿಶೂರ್.ಮಲ್ಲಪುರಂ, ಪಾಲಕ್ಕಾಡ್, ವಯನಾಡ್, ಕಣ್ಣೂರು, ಕಾಸರಗೋಡು ಮತ್ತು ಕೋಝೀಕೋಡ್ ನಲ್ಲಿ ರೆಡ್ ಅಲರ್ಟ್ ಇದೆ. 330 ನಿರಾಶ್ರಿತರ ಕೇಂದ್ರ ತೆರೆಯಲಾಗಿದ್ದು, 22, 500 ಜನರ ರಕ್ಷಣೆ ಮಾಡಲಾಗಿದೆ.
ಕೇರಳದಲ್ಲೂ ರಣ ಭೀಕರ ಮಳೆ, ವಯನಾಡ್ ಭೂ ಕುಸಿತಕ್ಕೆ 40 ಬಲಿ
ಭೀಕರ ಮಳೆಗೆ 30 ಜನ ಪ್ರಾಣ ಕಳೆದುಕೊಂಡಿದ್ದಾರೆ. ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿದ್ದು ಆಗಸ್ಟ್ 11 ರಿಂದ ಆರಂಭವಾಗುವ ಸಾಧ್ಯತೆ ಇದೆ. ಅಲಪುಜ, ಎರ್ನಾಕುಲಂ ಮತ್ತು ಪಟ್ಟನಂತಿಟ್ಟದಲ್ಲಿ ಸೇನೆ ರಕ್ಷಣಾ ಕಾರ್ಯ ನಡೆಸುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.